ಕೊಳವೆಬಾವಿಗಳ ನಿರ್ವಹಣೆಗೆ ಎಐ ಮೊರೆ ಹೋದ ಮಂಡಳಿ; ಚಿನ್ನಪ್ಪ ಗಾರ್ಡನ್‌ನಲ್ಲಿ ಅಳವಡಿಕೆ

| Published : Mar 26 2024, 01:55 AM IST

ಕೊಳವೆಬಾವಿಗಳ ನಿರ್ವಹಣೆಗೆ ಎಐ ಮೊರೆ ಹೋದ ಮಂಡಳಿ; ಚಿನ್ನಪ್ಪ ಗಾರ್ಡನ್‌ನಲ್ಲಿ ಅಳವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳವೆಬಾವಿಗಳ ಸಮರ್ಪಕ ನಿರ್ವಹಣೆಗಾಗಿ ಚಿನ್ನಪ್ಪ ಗಾರ್ಡನ್‌ನ ಜಲಮಂಡಳಿ ಕೊಳವೆಬಾವಿಗೆ ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಸೋಮವಾರ ಅದರ ಪರೀಕ್ಷೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಳವೆಬಾವಿಗಳ ಸಮರ್ಪಕ ನಿರ್ವಹಣೆಗಾಗಿ ಚಿನ್ನಪ್ಪ ಗಾರ್ಡನ್‌ನ ಜಲಮಂಡಳಿ ಕೊಳವೆಬಾವಿಗೆ ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಸೋಮವಾರ ಅದರ ಪರೀಕ್ಷೆ ನಡೆಸಲಾಯಿತು.

ಕೊಳವೆಬಾವಿಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ, ಅವುಗಳಲ್ಲಿ ನೀರಿನ ಮಟ್ಟ ಕಡಿಮೆಯಾದರೂ ನೀರನ್ನು ಮೇಲೆತ್ತಲಾಗುತ್ತಿದೆ. ಅದರಿಂದ ಮೋಟಾರುಗಳು ಹಾಳಾಗುವುದಲ್ಲದೆ, ಕೊಳವೆಬಾವಿಗಳಲ್ಲೂ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಸಿದರೆ ನೀರಿನ ಮಟ್ಟ ಕಡಿಮೆಯಾದರೆ ಮೋಟಾರುಗಳು ಕಾರ್ಯನಿರ್ವಹಿಸಿಸುವುದಿಲ್ಲ. ಅದರಿಂದ ಮೋಟಾರು ಹಾಳಾಗುವುದನ್ನು ತಡೆಯಬಹುದಾಗಿದೆ. ಅಂತಹ ತಂತ್ರಜ್ಞಾವನ್ನು ಇದೀಗ ಚಿನ್ನಪ್ಪ ಗಾರ್ಡ್‌ನ್‌ನ ಕೊಳವೆಬಾವಿಗೆ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕೊಳವೆಬಾವಿಗಳಿಗೂ ಅದನ್ನು ಅಳವಡಿಸಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.