ಸಾರಾಂಶ
ಕೆಲ ದಿನಗಳ ಹಿಂದಷ್ಟೇ ಗಾರೆ ಕೆಲಸ ಮಾಡಲು ಆಂಧ್ರಪ್ರದೇಶದ ಕುಟುಂಬವೊಂದು ಕೊನಘಟ್ಟಕ್ಕೆ ಬಂದಿತ್ತು.
ದೊಡ್ಡಬಳ್ಳಾಪುರ: ಕೃಷಿ ಹೊಂಡಕ್ಕೆ ಬಿದ್ದ 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೃತ ಬಾಲಕನನ್ನು ಆಂಧ್ರಪ್ರದೇಶ ಮೂಲದ ನಾಗಚೈತನ್ಯ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಗಾರೆ ಕೆಲಸ ಮಾಡಲು ಆಂಧ್ರಪ್ರದೇಶದ ಕುಟುಂಬವೊಂದು ಕೊನಘಟ್ಟಕ್ಕೆ ಬಂದಿತ್ತು. ತನ್ನ ತಂಗಿ ಜತೆ ಆಟವಾಡಲು ತೆರಳಿದ್ದ ಬಾಲಕ ಆಯತಪ್ಪಿ ಹೊಂಡಕ್ಕೆ ಬಿದ್ದಿದ್ದಾನೆ. ಕೂಡಲೇ ಆಕೆ ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷಕರು ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.