ತಿಗಡಿ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ

| Published : Jun 29 2024, 12:31 AM IST

ಸಾರಾಂಶ

ಬೈಲಹೊಂಗಲ: ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳಲು ತಾಲೂಕಿನ ತಿಗಡಿ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು. ಶುಕ್ರವಾರ ಮುಂಜಾನೆ ಒಂದೆ ಬಸ್ ಮರಕಟ್ಟಿಯಿಂದ ಬಂದಾಗ ಪ್ರಯಾಣಿಕರಿಂದ ತುಂಬಿತ್ತು. ಪ್ರತಿ ದಿನ ಬರುವ ಮತ್ತೊಂದು ಬಾರದ್ದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು, ಗ್ರಾಮಸ್ಥರು ಬಸ್ ತಡೆದು ಪ್ರತಿಭಟಿಸಿದರು.

ಬೈಲಹೊಂಗಲ: ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳಲು ತಾಲೂಕಿನ ತಿಗಡಿ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು. ಶುಕ್ರವಾರ ಮುಂಜಾನೆ ಒಂದೆ ಬಸ್ ಮರಕಟ್ಟಿಯಿಂದ ಬಂದಾಗ ಪ್ರಯಾಣಿಕರಿಂದ ತುಂಬಿತ್ತು. ಪ್ರತಿ ದಿನ ಬರುವ ಮತ್ತೊಂದು ಬಾರದ್ದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು, ಗ್ರಾಮಸ್ಥರು ಬಸ್ ತಡೆದು ಪ್ರತಿಭಟಿಸಿದರು.

ಗ್ರಾಪಂ ಸದಸ್ಯ ಬಾಬು ಪಾಟೀಲ ಮಾತನಾಡಿ, ಪ್ರತಿ ದಿನ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಹೆಚ್ಚಿನ ಬಸ್ ಗಳ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು. ಸಾರಿಗೆ ವ್ಯವಸ್ಥಾಪಕರಿಗೆ ಕೂಡಲೇ ಬಸ್ ವ್ಯವಸ್ಥೆ ಮಾಡಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟಣೆ ಮಾಡಲಾಗುವದೆಂದು ಮೋಬೈಲ ಮೂಲಕ ಎಚ್ಚರಿಕೆ ನೀಡಿದರು.

ನಂತರ ಮತ್ತೊಂದು ಬಸ್ ವ್ಯವಸ್ಥೆ ಮಾಡಿದಾಗ ಪ್ರತಿಭಟಣೆ ಹಿಂಪಡೆಯಲಾಯಿತು. ಯಲ್ಲಪ್ಪ ನಾಯ್ಕರ, ಮಂಜು ಮರಾಠೆ, ಬಸು ಕೊಟಗಿ ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.