ವ್ಯಾಪಕ ಮಳೆ ಹಿನ್ನೆಲೆ ಕಾವೇರಿ ನದಿ ಹರಿವು ಹೆಚ್ಚಳ

| N/A | Published : Jun 18 2025, 03:34 AM IST / Updated: Jun 18 2025, 01:25 PM IST

ವ್ಯಾಪಕ ಮಳೆ ಹಿನ್ನೆಲೆ ಕಾವೇರಿ ನದಿ ಹರಿವು ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಾಪಕ ಮಳೆ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿಯಲು ಆರಂಭಿಸಿದೆ. ನದಿ ತಟದ ಎರಡು ತಗ್ಗು ಪ್ರದೇಶದಲ್ಲಿ ನೀರು ಹರಿಯಲು ಆರಂಭಿಸಿದೆ.

ಕುಶಾಲನಗರ: ವ್ಯಾಪಕ ಮಳೆ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿಯಲು ಆರಂಭಿಸಿದೆ. ನದಿ ತಟದ ಎರಡು ಬದಿಯಲ್ಲಿ ತಗ್ಗು ಪ್ರದೇಶದಲ್ಲಿ ನೀರು ಹರಿಯಲು ಆರಂಭಿಸಿದೆ. ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಿದ ಬೆನ್ನಲ್ಲೇ ಕಾವೇರಿಯಲ್ಲಿ ಪ್ರವಾಹ ಉಂಟಾಗಲು ಕಾರಣವಾಗಿದೆ.

ಜಿಲ್ಲೆಯಲ್ಲಿ 75.67 ಮಿ.ಮೀ. ಮಳೆ

ಕನ್ನಡಪ್ರಭ ವಾರ್ತೆ ಮಡಿಕೇರಿಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 75.67 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 8.36 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 989.51 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 496.42 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 122.45 ಮಿ.ಮೀ,

ವಿರಾಜಪೇಟೆ ತಾಲೂಕಿನಲ್ಲಿ 72.10 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 71.07 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 74.35 ಮಿ.ಮೀ ಹಾಗೂ ಕುಶಾಲನಗರ ತಾಲೂಕಿನಲ್ಲಿ 38.40 ಮಿ.ಮೀ. ಮಳೆಯಾಗಿದೆ.ಹೋಬಳಿ ವಿವರ -ಮಡಿಕೇರಿ ಕಸಬಾ 90, ನಾಪೋಕ್ಲು 88.80, ಸಂಪಾಜೆ 116, ಭಾಗಮಂಡಲ 195, ವಿರಾಜಪೇಟೆ 77.20, ಅಮ್ಮತ್ತಿ 67, ಹುದಿಕೇರಿ 87.60, ಶ್ರೀಮಂಗಲ 56.60, ಪೊನ್ನಂಪೇಟೆ 80, ಬಾಳೆಲೆ 60.09, ಸೋಮವಾರಪೇಟೆ 74, ಶನಿವಾರಸಂತೆ 48, ಶಾಂತಳ್ಳಿ 140, ಕೊಡ್ಲಿಪೇಟೆ 35.40, ಕುಶಾಲನಗರ 24.80, ಸುಂಟಿಕೊಪ್ಪ 52 ಮಿ.ಮೀ.ಮಳೆಯಾಗಿದೆ.

Read more Articles on