ಸಾರಾಂಶ
ಸಮತಾ ಸೈನಿಕ ದಳದ ಶತಮಾನೋತ್ಸವವನ್ನು ಡಿ.24ರಂದು ಮಂಗಳವಾರ ಯಳಂದೂರಿನಲ್ಲಿ ಆಯೋಜಿಸಲಾಗಿದೆ ಎಂದು ಸೈನಿಕದಳ ಜಿಲ್ಲಾಧ್ಯಕ್ಷ ಎನ್.ಸುರೇಶ್.ಮದ್ದೂರು ತಿಳಿಸಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಮತಾ ಸೈನಿಕ ದಳದ ಶತಮಾನೋತ್ಸವವನ್ನು ಡಿ.24ರಂದು ಮಂಗಳವಾರ ಯಳಂದೂರಿನಲ್ಲಿ ಆಯೋಜಿಸಲಾಗಿದೆ ಎಂದು ಸೈನಿಕದಳ ಜಿಲ್ಲಾಧ್ಯಕ್ಷ ಎನ್.ಸುರೇಶ್.ಮದ್ದೂರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮೈಸೂರು ಉರಿಲಿಂಗಿಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ, ಆರ್ಪಿಐ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ, ಚಿತ್ರನಟ ಅಹಿಂಸಾ ಚೇತನ್, ಅಕ್ಕ ಅಕಾಡೆಮಿಯ ಡಾ.ಶಿವಕುಮಾರ್ ಹಾಗೂ ಸುರೇಶ್ ಗೌತಮ್ ಇತರ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಜನಪ್ರತಿಗಳು ಅಂಬೇಡ್ಕರ್ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.ಜಾತಿವಾದಿ ಶಕ್ತಿಗಳು ಅಂಬೇಡ್ಕರ್ ಅವರ ಮೇಲೆ ದಾಳಿ, ದಾಂಧಲೆ ನಡೆದಾಗ ಚಳವಳಿಯ ನೇತಾರರ ಪ್ರಾಣ ರಕ್ಷಣೆಗಾಗಿ ಮಹರ್ ರೆಜಿಮೆಂಟ್ನ ಐವರು ಸೇನಾ ಯೋಧರು ಟೊಂಕಕಟ್ಟಿ ನಿಂತು ಹೋರಾಟ ನಡೆಸಿದ ಸ್ವಯಂಸೇವಕರ ಪಡೆಯೇ ಸಮತಾ ಸೈನಿಕ ದಳ ಎಂಬ ಸಂಘಟನೆಯು ಸಂಸ್ಥಾಪನೆಗೊಂಡು 2024 ಸೆ.24ಕ್ಕೆ ನೂರು ವರ್ಷ ತುಂಬಿತು. ಅಂಬೇಡ್ಕರ್ ಅವರ ಆಶಯಗಳನ್ನು ನನಸು. ಮಾಡಲು ಸಮತಾ ಸೈನಿಕ ದಳದ ಕಾರ್ಯಕ್ರಮವನ್ನು ಎಲ್ಲ ತಾಲೂಕು ಮಟ್ಟ, ಹೋಬಳಿ ಮಟ್ಟ, ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಮತಾ ಸೈನಿಕದಳ ಜಿಲ್ಲಾ ಸಮಿತಿ ಜಿಲ್ಲಾ ಪ್ರ.ಕಾರ್ಯದರ್ಶಿ ಕೆಸ್ತೂರು ರಾಜು, ಹನೂರು ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಯಳಂದೂರು ತಾಲೂಕು ಗೌರವ ಅಧ್ಯಕ್ಷ ಟೈಲರ್ ಮಹದೇವಯ್ಯ, ಆರ್ಪಿಐ ಪಕ್ಷದ ಜಿಲ್ಲಾ ಪ್ರ.ಕಾರ್ಯದರ್ಶಿ ಅಂಬಳೆ ಮಹದೇವು, ಮುಖಂಡ ನಂಜುಂಡಸ್ವಾಮಿ ಹಾಜರಿದ್ದರು.