ಇಂದಿನಿಂದ ಚರಕ ಉತ್ಸವ

| Published : Feb 24 2024, 02:31 AM IST

ಸಾರಾಂಶ

ಭೀಮನಕೋಣೆ ಕವಿಕಾವ್ಯ ಟ್ರಸ್ಟ್ ಮತ್ತು ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಫೆ.೨೪ ಮತ್ತು ೨೫ರಂದು ಸಾಗರ ತಾಲೂಕಿನ ಹೊನ್ನೆಸರದ ಶ್ರಮಜೀವಿ ಆಶ್ರಮದಲ್ಲಿ ಚರಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಫೆ.೨೪ರಂದು ಕೈಮಗ್ಗ ಜವಳಿ ಇಲಾಖೆ ಸಹಯೋಗದೊಂದಿಗೆ ಪವಿತ್ರ ವಸ್ತ್ರ ಯೋಜನೆ ಅಡಿಯಲ್ಲಿ ಕೊಡು-ಕೊಳ್ಳುವವರ ಸಮಾವೇಶ ಹಾಗೂ ಪವಿತ್ರ ವಸ್ತ್ರ ಕುರಿತು ವಿಚಾರ ಮಂಥನ ನಡೆಯಲಿದೆ. ದೇಶದ ಹೆಸರಾಂತ ವಿನ್ಯಾಸಕಾರರು, ಕೈ ಉತ್ಪನ್ನಗಳ ಉತ್ಪಾದಕರು, ವಿವಿಧ ಜಿಲ್ಲೆಯ ನೇಕಾರರು, ಸಾಹಿತಿಗಳು, ಬರಹಗಾರರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

- ದೆಹಲಿ ಹರಿಜನ್ ಸೇವಕ ಸಂಘದ ಸಂಜಯ್ ರೈ ಅವರಿಂದವುತ್ಸವ ಉದ್ಘಾಟನೆ

- ಮೈಸೂರಿನ ನವೋದಯ ತಂಡದಿಂದ ಅಯೋಧ್ಯಾ ಕಾಂಡ ನಾಟಕ ಪ್ರದರ್ಶನ

- ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿರುವ ನೇಕಾರರು, ಸಾಹಿತಿಗಳು, ಬರಹಗಾರರು - - - ಸಾಗರ: ಭೀಮನಕೋಣೆ ಕವಿಕಾವ್ಯ ಟ್ರಸ್ಟ್ ಮತ್ತು ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಫೆ.೨೪ ಮತ್ತು ೨೫ರಂದು ಹೊನ್ನೆಸರದ ಶ್ರಮಜೀವಿ ಆಶ್ರಮದಲ್ಲಿ ಚರಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಫೆ.೨೪ರಂದು ಕೈಮಗ್ಗ ಜವಳಿ ಇಲಾಖೆ ಸಹಯೋಗದೊಂದಿಗೆ ಪವಿತ್ರ ವಸ್ತ್ರ ಯೋಜನೆ ಅಡಿಯಲ್ಲಿ ಕೊಡು-ಕೊಳ್ಳುವವರ ಸಮಾವೇಶ ಹಾಗೂ ಪವಿತ್ರ ವಸ್ತ್ರ ಕುರಿತು ವಿಚಾರ ಮಂಥನ ನಡೆಯಲಿದೆ. ದೇಶದ ಹೆಸರಾಂತ ವಿನ್ಯಾಸಕಾರರು, ಕೈ ಉತ್ಪನ್ನಗಳ ಉತ್ಪಾದಕರು, ವಿವಿಧ ಜಿಲ್ಲೆಯ ನೇಕಾರರು, ಸಾಹಿತಿಗಳು, ಬರಹಗಾರರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಜೆ ೬-೩೦ಕ್ಕೆ ದೆಹಲಿ ಹರಿಜನ್ ಸೇವಕ ಸಂಘದ ಸಂಜಯ್ ರೈ ಚರಕ ಉತ್ಸವ ಉದ್ಘಾಟಿಸಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಮಾವಿನಸರ ಉಪಸ್ಥಿತರಿರುವರು. ಚರಕ ಸಂಸ್ಥೆ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೭-೩೦ಕ್ಕೆ ಮೈಸೂರಿನ ನವೋದಯ ತಂಡದಿಂದ ಅಯೋಧ್ಯಾ ಕಾಂಡ ನಾಟಕ ಪ್ರದರ್ಶನ ಇರುತ್ತದೆ.

ಫೆ.೨೫ರಂದು ಸಂಜೆ ೬-೩೦ಕ್ಕೆ ಕಾಯಕ ಪ್ರಶಸ್ತಿ ವಿತರಣೆ ಹಾಗೂ ಸಮಾರೋಪ ಸಮಾರಂಭ ಇರುತ್ತದೆ. ಶಾಸಕ ಗೋಪಾಲಕೃಷ್ಣ ಬೇಳೂರು ಕಾಯಕ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದು, ಗೌರಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೭-೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಟ್ಟಿಯಂಗಡಿ ಯಕ್ಷಗಾನ ಮಂಡಳಿ ಮತ್ತು ಅತಿಥಿ ಕಲಾವಿದರಿಂದ ಚಂದ್ರಾವಳಿ ವಿಲಾಸ ಯಕ್ಷಗಾನ ಪ್ರದರ್ಶನ ಇರುತ್ತದೆ.- - - - (-ಸಾಂದರ್ಭಿಕ ಚಿತ್ರ)

-ಕ್ಲಾತ್ಸ್‌.ಜೆಪಿಜಿ