ಸಾರಾಂಶ
ಚಿಮ್ಮಡ ಗ್ರಾಮದ ಆರಾಧ್ಯ ದೇವತೆ ಮೂರು ಮುಖದವ್ವದೇವಿ (ಲಕ್ಷ್ಮೀ ದೇವಿ) ಜಾತ್ರಾ ಮಹೋತ್ಸವ ಶನಿವಾರ ಆರಂಭವಾಯಿತು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರಚಿಮ್ಮಡ ಗ್ರಾಮದ ಆರಾಧ್ಯ ದೇವತೆ ಮೂರು ಮುಖದವ್ವದೇವಿ (ಲಕ್ಷ್ಮೀ ದೇವಿ) ಜಾತ್ರಾ ಮಹೋತ್ಸವ ಶನಿವಾರ ಆರಂಭವಾಯಿತು.
ಮೂರು ವರ್ಷಗಳಿಗೊಮ್ಮೆ ನಾಲ್ಕು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಬೆಳಗ್ಗೆ ವಿಶೇಷ ಪೂಜೆ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿಯಿತು. ರಾತ್ರಿ ಡೊಳ್ಳು ಕುಣಿತ, ಬ್ಯಾಂಡ್ ಭಾಜಾ, ಹಲಿಗೆಮೇಳ ಹಾಗೂ ಬ್ಯಾಂಜೋ ತಂಡದೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಹನುಮಾನ ಮಂದಿರಕ್ಕೆ ಅಲಂಕೃತ ದೊಡ್ಡಪಾದ ಪಾದುಕೆಗಳನ್ನು ಅರ್ಪಿಸುವ ಸಂಪ್ರದಾಯ ನಡೆಯಿತು.ಮೆರವಣಿಗೆಯಲ್ಲಿ ಕುದುರೆ ಸೋಗು, ಯಕ್ಷಗಾನ ಹಾಗೂ ವಿವಿಧ ವೇಷಧಾರಿಗಳಿಂದ ನೃತ್ಯ ಪ್ರದರ್ಶನ ಆಕರ್ಷಿಸಿದವು. ರಾತ್ರಿ ಶ್ರೀನಿಧಿ ಸ್ಪೋರ್ಟ್ ಕ್ಲಬ್ನವರಿಂದ 55-58 ಕೆ.ಜಿ. ತೂಕದವರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
14ರಂದು ಮುಂಜಾನೆ ದೇವಿಯ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ ಮಹಾಪ್ರಸಾದ ವಿತರಣೆ, ರಾತ್ರಿ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.15 ರಂದು ಮಹಾರಾಷ್ಟ್ರದ ಕೊಲ್ಲಾಪುರದ ಸೂರಜಕುಮಾರ್ ಪ್ರೋಡಕ್ಷನ್ ರವರ ಸೈರಾಟ್ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ನೆರೆಯ ಜಿಲ್ಲೆ ತಾಲೂಕುಗಳಿಂದ ಸಹಸ್ರಾರು ಜನ ಭಕ್ತಾಧಿಗಳು ಪಾಲ್ಗೊಳ್ಳಲಿದ್ದು ಬುಧವಾರ ನಡೆಯುವ ವಿಶೇಷ ಪೂಜೆ ಮಹಾಪ್ರಸಾದ ಕಾರ್ಯಕ್ರಮದೊಂದಿಗೆ ಜಾತ್ರೆ ಮಂಗಲಗೊಳ್ಳಲಿದೆಯೆಂದು ಮೂರು ಮೂಖದವ್ವದೇವಿ (ಲಕ್ಷಮೀ ದೇವಿ) ಸೇವಾ ಸಮಿತಿ ತಿಳಿಸಿದೆ.