ಸಾರಾಂಶ
ಹಾಸನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎನ್. ಶೈಲಜಾ ಹಾಸನ್ ಅವರು ಆಯ್ಕೆಯಾಗಿವುದಕ್ಕೆ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
22ನೇ ಸಮ್ಮೇಳನ । ವೀರಶೈವ ಮಹಾಸಭಾ ಸನ್ಮಾನ
ಕನ್ನಡಪ್ರಭ ವಾರ್ತೆ ಹಾಸನಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ನಡೆಯುವ ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎನ್. ಶೈಲಜಾ ಹಾಸನ್ ಅವರು ಆಯ್ಕೆಯಾಗಿವುದಕ್ಕೆ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾ.23 ಹಾಗೂ ೨೪ ರಂದು ನಡೆಯುವ ೨೨ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎನ್.ಶೈಲಜಾ ಹಾಸನ್ ಆಯ್ಕೆಯಾಗಿವುದಕ್ಕೆ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅವರನ್ನು ಸನ್ಮಾನಿಸಿತು.ಈ ಸಂದರ್ಭದಲ್ಲಿ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಹಾಸನ ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ವಿ.ಅಶೋಕ್, ಗೌರವಾಧ್ಯಕ್ಷ ಎನ್.ಶಿವಪ್ಪ ಪರಮೇಶ್ವರಪ್ಪ ಬಿ.ಎಚ್. ಇದ್ದರು.
ಈ ವೇಳೆ ಎಚ್.ವಿ. ಅಶೋಕ್, ಪರಮೇಶ್ವರಪ್ಪ, ಎಂ.ಆರ್.ಸಿ.ಎಮ್.ಲತಾ, ಅನಿತಾ ಯೋಗೀಶ್, ಎಂ.ಎಸ್. ಲೀಲಾ ಧರ್ಮಪ್ಪ ಇದ್ದರು.22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಶೈಲಜಾ ಹಾಸನ್ ಅವರನ್ನು ವೀರಶೈವ ಮಹಾಸಭಾದಿಂದ ಅಭಿನಂದಿಸಲಾಯಿತು.