ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನದ ಆಶಯವನ್ನು ಉಲ್ಲಂಘಿಸಿದ್ದ ರೀತಿಯನ್ನು ಯಾವುದೇ ಭಾರತೀಯ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ಅನೀಲ ಜಮಾದಾರ ಅಭಿಪ್ರಾಯ ಪಟ್ಟರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಸರ್ವಾಧಿಕಾರ ಮನಸ್ಥಿತಿಯ ಕರಾಳ ಇತಿಹಾಸ ನೆನಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂದು ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು ಕಡೆಗಣಿಸಲಾಯಿತು. ಮೂಲಭೂತ ಹಕ್ಕುಗಳನ್ನು ಅಮಾನತ್ತಿನಲ್ಲಿಡಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರನ್ನು ಜೈಲಿಗೆ ಕಳುಹಿಸಲಾಯಿತು. ಸರ್ಕಾರ ಪ್ರಜಾಪ್ರಭುತ್ವವನ್ನು ಬಂಧನದಲ್ಲಿರಿಸಿತ್ತು. ಸಂಸತ್ತಿನ ಧ್ವನಿಯನ್ನು ಕ್ಷೀಣಗೊಳಿಸಲಾಯಿತು. ನ್ಯಾಯಾಲಯಗಳನ್ನು ನಿಯಂತ್ರಿಸಲು ಯತ್ನಿಸಲಾಯಿತು. ಹಿಂದುಳಿದ, ಬಡವರು ಹಾಗೂ ದೀನದಲಿತರನ್ನು ಗುರಿಯಾಗಿಸಲಾಗಿತ್ತು.ಇವೆಲ್ಲವೂ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಸರ್ಕಾರದ ಕುತಂತ್ರಗಳಿಗೆ ಉದಾಹರಣೆ ಎಂದು ವಿವರಿಸಿದರು.ಸಾಮಾಜಿಕ ಹೋರಾಟದಿಂದಾಗಿ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಹಾಗೂ ಹೊಸ ಚುನಾವಣೆ ಘೋಷಿಸಲು ಕಾರಣವಾಯಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲು ಎದುರಾಯಿತು. ತುರ್ತು ಪರಿಸ್ಥಿತಿ ಹೇರಿದ ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರ ಕರಾಳ ಇತಿಹಾಸಕ್ಕೆ ಇಂದಿಗೆ 50 ವರ್ಷ ಆಗಿದ್ದು, ಅದನ್ನು ನೆನಪಿಸುವ ಹಾಗೂ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮ ಎಂದರು.
ಈ ವೇಳೆ ಅನಿಲ್ ಗೌಡ ಬಿರಾದಾರ್, ಸೋಮು ನಿಂಬರಗಿಮಠ, ಮಂಜುನಾಥ್, ದೇವರ, ಸಿಕಂದರ್ ಬೋರಾಮಣಿ, ವಿಜಯಕುಮಾರ ಮಾನೆ, ಮಹದೇವ ಗುಡ್ಡೊಡಗಿ, ರಾಮಸಿಂಗ ಕನ್ನೂಳ್ಳಿ, ಶರಣಗೌಡ ಬಂಡಿ, ವಜ್ರಕಾಂತ್ ಕುಡಿಗನೂರ, ಸಾಗರ್ ಬಿರಾದರ್, ರಮೇಶ್ ಕೋಳಿ, ಅಣ್ಣಾರಾಯ್ ಮದರಿ, ಸಂಜು ದಶವಂತ್ , ಪ್ರಶಾಂತ್ ಗೌಳಿ, ಸಂಜೀವ್ ಪವಾರ, ಪ್ರೇಮ್ ರಾಠೋಡ ಮೊದಲಾದವರು ಇದ್ದರು.