ಸಾರಾಂಶ
ಮನುಷ್ಯರಾದ ಮೇಲೆ ಜೀವನದಲ್ಲಿ ಉತ್ತಮ ನಡವಳಿಕೆ ರೂಢಿಸಿಕೊಳ್ಳಬೇಕು.
ಯಲಬುರ್ಗಾ: ಮಾನವ ತನ್ನ ಜೀವಿತಾವಧಿಯಲ್ಲಿ ಸಮಾಜಕ್ಕೆ ಒಳ್ಳೆಯದಾಗುವಂತೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಅಳವಂಡಿಯ ಎಚ್ಚರಪಜ್ಜ ಶಾಸ್ತ್ರಿ ಹೇಳಿದರು.
ತಾಲೂಕಿನ ಮಕ್ಕಳ್ಳಿ ಗ್ರಾಮದ ಶಿವಾನಂದ ಮಠದಲ್ಲಿ ಇತ್ತೀಚೆಗೆ ನಡೆದ ೭೦ನೇ ಮಾಸಿಕ ಶಿವಾನುಭವಗೋಷ್ಠಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯರಾದ ಮೇಲೆ ಜೀವನದಲ್ಲಿ ಉತ್ತಮ ನಡವಳಿಕೆ ರೂಢಿಸಿಕೊಳ್ಳಬೇಕು. ಜತೆಗೆ ಮಾನವೀಯ ಮೌಲ್ಯ ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಸಹಕಾರಿಯಾಗುತ್ತದೆ. ಶರಣರ ಚಿಂತನೆ, ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಮುಖಂಡ ನಿಂಗಪ್ಪ ಹಳ್ಳಿಕೇರಿ ಮಾತನಾಡಿದರು. ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಶರಣಪ್ಪ ಹಿರೇಅರಳಿಹಳ್ಳಿ, ಶರಣಯ್ಯ ಬಳಗಾನೂರಮಠ, ಅಡಿವೆಪ್ಪಯ್ಯ ಸೊಪ್ಪಿಮಠ, ಮಳೆಯಪ್ಪಯ್ಯ ಬಳಗೇರಿ, ಶರಣಪ್ಪ ಹೂಗಾರ, ಯಂಕಪ್ಪ ಸರಕ್ಲಿ, ಬೆಟದಪ್ಪ ಸೂಜಿ, ಫಾಲಾಕ್ಷಪ್ಪ ಪತ್ತಾರ, ಶಶಿಧರ ನಾಯಕ, ಗುನ್ನೆಪ್ಪ ಚನ್ನದಾಸರ, ಹನುಮಗೌಡ ಮಾನಪ್ಪನವರ, ನೀಲಪ್ಪ ಹೊಸ್ಮನಿ, ಶೇಖರಗೌಡ ಮಾಲಿಪಾಟೀಲ್, ಉಮಾಮಹೇಶ್ವರಿ ಹೂಗಾರ, ಅಲ್ಲೇಸಾಬ್ ನದಾಫ್, ಶ್ರೀಕಾಂತಗೌಡ ಮಾಲಿಪಾಟೀಲ್ ಇದ್ದರು.