ಭೋಜನಾಲಯಕ್ಕೆ ತಡೆಗೋಡೆ ನಿರ್ಮಾಣ

| Published : Jun 16 2025, 06:31 AM IST

ಸಾರಾಂಶ

ಮೈಸೂರು: ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ವತಿಯಿಂದ ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆಯ ಭೋಜನಾಲಯಕ್ಕೆ ತಡೆಗೋಡೆ ನಿರ್ಮಿಸಲಾಗಿದೆ.

ಮೈಸೂರು: ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ವತಿಯಿಂದ ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆಯ ಭೋಜನಾಲಯಕ್ಕೆ ತಡೆಗೋಡೆ ನಿರ್ಮಿಸಲಾಗಿದೆ.

ಹೂಟಗಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಧ್ಯಾಹ್ನದ ಭೋಜನಕ್ಕೆ ಭೋಜನಾಲಯವಿದ್ದು, ನಾಲ್ಕು ಕಡೆ ತಡೆಗೋಡೆ ಇಲ್ಲದೆ ಹೊರಗಿನಿಂದ ಜೋರಾಗಿ ಬೀಸುವ ಗಾಳಿಯಿಂದ ಧೂಳು ಊಟ ಮಾಡುವ ತಟ್ಟೆಗೆ ಬೀಳುತ್ತಿತ್ತು.

ಹೀಗಾಗಿ, ಶಾಲೆಯ ಮುಖ್ಯ ಶಿಕ್ಷಕರು ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಟಿ.ಎಚ್. ವೆಂಕಟೇಶ್ ಅವರಿಗೆ ಭೋಜನಾಲಯ ನಾಲ್ಕು ಕಡೆ ಯಾವುದಾದರೂ ರೀತಿಯಲ್ಲಿ ತಡೆಗೋಡೆಯನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಈ ಮನವಿಗೆ ಸ್ಪಂದಿಸಿದ ಟಿ.ಎಚ್. ವೆಂಕಟೇಶ್ ಅವರು 35000 ರೂ. ವೆಚ್ಚದಲ್ಲಿ ಪಾಲಿ ಕಾರ್ಬೋನೇಟ್ ಶೀಟ್ ಗಳನ್ನು ಅಳವಡಿಸಿದ್ದಾರೆ. ಇದು ವಿದ್ಯಾರ್ಥಿಗಳು ಊಟ ಮಾಡಲು ಸಹಕಾರಿಯಾಗಿದೆ ಎಂದು ಮುಖ್ಯಶಿಕ್ಷಕಿ ಪಿ.ವಿ. ಸಂಗೀತಾ, ಲಯನ್ಸ್ ಜಿಲ್ಲಾಧ್ಯಕ್ಷ ಸಿ.ಆರ್. ದಿನೇಶ್ ಧನ್ಯವಾದ ಅರ್ಪಿಸಿದ್ದಾರೆ.