ಕನ್ನಡಪ್ರಭ ವಾರ್ತೆ ಇಂಡಿನಗರದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ತಾಂತವವಾಡುತ್ತಿದ್ದು, ರೈತರು, ಸಾರ್ವಜನಿಕರಿಗೆ ಆಸ್ತಿ ಖರೀದಿ ಸಮಯದಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ನಗರದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ತಾಂತವವಾಡುತ್ತಿದ್ದು, ರೈತರು, ಸಾರ್ವಜನಿಕರಿಗೆ ಆಸ್ತಿ ಖರೀದಿ ಸಮಯದಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕರವೇ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ, ಉಪ ನೋಂದಣಾಧಿಕಾರಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಕಚೇರಿಯಲ್ಲಿ ಏಜಂಟರ್‌ ಮೂಲಕ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಕೂಡಲೆ ಅವರ ಮೇಲೆ ಪೊಲೀಸ್‌ ಹಾಗೂ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅಮಾನತ್ತು ಮಾಡಬೇಕು. ಅವರು ಕರ್ತವ್ಯಕ್ಕೆ ಬಂದಾಗಿನಿಂದ ಇಲ್ಲಿಯ ವರೆಗಿನ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಉಂಟಾದ ಹಾನಿಯನ್ನು ಅವರಿಂದಲೇ ಭರಿಸಬೇಕು. ನೀರಾವರಿ ಜಮೀನಿಗೆ ಒಣ ಬೇಸಾಯ ಮಾಡಿ ಸರ್ಕಾರ ಖಜಾನೆಗೆ ಬರುವ ಆದಾಯಕ್ಕೆ ನಷ್ಟ ಉಂಟು ಮಾಡಿದ್ದಾರೆ. ಸರ್ಕಾರದ ಎಲ್ಲ ನಿಯಮಗಳನ್ನು ಗಾಳಿಗೆ ತೋರಿರುವ ಅಧಿಕಾರಿ, ತನ್ನಿಷ್ಟದಂತೆ ವರ್ತಿಸುತ್ತಿದ್ದಾನೆ, ಅಲ್ಲದೇ, ಈ ಕಚೇರಿಯಲ್ಲಿ ಭ್ರಷ್ಟಾಚಾರದಲ್ಲಿ ಅಧಿಕಾರಿಗಳು, ದಸ್ತು ಬರಹಗಾರರು ಅವರನ್ನು ಅಮಾನತುಗೊಳಿಸಿಬೇಕು ಎಂದು ಒತ್ತಾಯಿಸಿದರು. ಕೂಡಲೇ ಮೇಲಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಢಿದರು.

ಮಹೇಶ ಹೂಗಾರ, ಈರಣಗೌಡ ಪಾಟೀಲ, ವಿಠ್ಠಲ ಸೊನ್ನ, ತಿಮ್ಮಪ್ಪ ಖೇಡಗಿ, ಸಿದ್ದಗೊಂಡ ಪೂಜಾರಿ, ಖಾಜಪ್ಪ ಮುಲ್ಲಾ, ಕಿರಣ್ ಪೂಜಾರಿ, ಸಿದ್ದರಾಮ ಪೂಜಾರಿ ಸೇರಿದಂತೆ ಇತರರು ಇದ್ದರು.