ಸಚಿವ ಸಂಪುಟದಿಂದ ಡಿ.ಕೆ.ಶಿವಕುಮಾರರನ್ನು ವಜಾಗೊಳಿಸಿ

| Published : Mar 29 2025, 12:31 AM IST

ಸಾರಾಂಶ

ಸಂವಿಧಾನ ಬದಲಾಯಿಸುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆ ಖಂಡಿಸಿ ಮತ್ತು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ: ಸಂವಿಧಾನ ಬದಲಾಯಿಸುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆ ಖಂಡಿಸಿ ಮತ್ತು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿಯ ರೈಲುನಿಲ್ದಾಣ ಬಳಿ ಇರುವ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿರುವ ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಸೀಲ್ದಾರ್‌ ಕಚೇರಿಯ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ನಂತರ ತಹಸೀಲ್ದಾರ್‌ ಕಚೇರಿ ಎದುರು ಕೆಲಹೊತ್ತು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಂವಿಧಾನ ಎಲ್ಲ ವರ್ಗದ ಜನರಿಗೂ ಹಕ್ಕು ಒದಗಿಸಿದೆ. ಭಾರತದ ಸಂವಿಧಾನ ವಿಶ್ವದಲ್ಲಿ ಅತೀ ದೊಡ್ಡ ಸಂವಿಧಾನ. ಇಂತಹ ಸಂವಿಧಾನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬದಲಿಸುವ ಹೇಳಿಕೆ ನೀಡಿರುವುದು ಖಂಡನೀಯ. ಆದ್ದರಿಂದ ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಹಾನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಮುಖಂಡರಾದ ಬಿ.ಬಿ. ಗಂಗಾಧರಮಠ, ವಿನಾಯಕ ಗಾಡಿವಡ್ಡರ, ಗಂಗಾಧರ ಪೆರೂರ, ನವೀನಕುಮಾರ, ಮಾರುತಿ ಹಿಂಡಸಗೇರಿ, ಶ್ರೀಕಾಂತ ತೆಲಗರ, ಗುರಯ್ಯ ವಿರಕ್ತಿಮಠ, ಪೂರ್ಣಿಮಾ ಸವದತ್ತಿ, ಸರಸ್ವತಿ ಕಟ್ಟಿಮನಿ, ಶಹನಾಜ, ಪೂಜಾ ಮೆಣಸಿನಕಾಯಿ, ನಾಗರಾಜ ಗುಡದರಿ, ಶಂಕರಗೌಡ ದೊಡ್ಡಮನಿ, ದೊಡ್ಡಪ್ಪಾ ಧರಣಿ, ಬಾಷಾ ಮುದಗಲ್, ಪುನಿತ್ ಅಡಗಲ್ಲ, ಸಿದ್ದು ಮಹಾಂತಒಡೆಯರ್, ಈಶ್ವರ ತೆಗ್ಗಿ, ಶಂಕರ ಪವಾರ, ಗೋಪಾಲ ನಿರಣಕಿ ಸೇರಿದಂತೆ ಹಲವರಿದ್ದರು.