ಹರಿಹರ: ದರ್ಗಾ ಕಾಣಿಕೆ ಹುಂಡಿಗೆ ಬೀಗಮುದ್ರೆ

| Published : Jun 29 2025, 01:36 AM IST

ಹರಿಹರ: ದರ್ಗಾ ಕಾಣಿಕೆ ಹುಂಡಿಗೆ ಬೀಗಮುದ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಹಜರತ್ ನಾಡಬಂದ್ ಷಾ ವಲಿ ದರ್ಗಾ ಕಾಣಿಕೆ ಹುಂಡಿಗೆ ಜಿಲ್ಲಾ ವಕ್ಫ್ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.

ಹರಿಹರ: ನಗರದ ಹಜರತ್ ನಾಡಬಂದ್ ಷಾ ವಲಿ ದರ್ಗಾ ಕಾಣಿಕೆ ಹುಂಡಿಗೆ ಜಿಲ್ಲಾ ವಕ್ಫ್ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.

ಹುಂಡಿಯಲ್ಲಿನ ಹಣ ಏ.೧೮ರಂದು ಕಾಣೆಯಾಗಿದೆ ಎಂದು ದರ್ಗಾದ ಮುಜಾವರ್‌ (ಅರ್ಚಕ) ಅವರು ಪೊಲೀಸ್ ಠಾಣೆಗೆ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಏ.೧೭ರ ರಾತ್ರಿವರೆಗೂ ಕಾಣಿಕೆ ಹಣದಿಂದ ತುಂಬಿದ್ದ ಹುಂಡಿಯು ಏ.೧೮ರಂದು ಬೆಳಗ್ಗೆ ಖಾಲಿಯಾಗಿತ್ತು ಎಂದು ದೂರಿದ್ದರು.

ಪ್ರಕರಣ ನಡೆದು 2 ತಿಂಗಳೇ ಕಳೆದರೂ ವಕ್ಫ್ ಮಂಡಳಿ ಅಧಿಕಾರಿಗಳಾಗಲಿ, ಪೊಲೀಸರಾಗಲಿ, ದರ್ಗಾದ ಆಡಳಿತ ಮಂಡಳಿಯವರಾಗಲಿ ಹುಂಡಿ ಹಣ ಕಳವು ವಿರುದ್ಧ ಕ್ರಮ ಕೈಗೊಂಡಿಲ್ಲ, ದೂರನ್ನೂ ದಾಖಲಿಸಿಲ್ಲ. ದರ್ಗಾ ಭಕ್ತರಿಗೆ ನೋವಾಗಿದೆ ಎಂದು ಮುಜಾವರ್‌ ಸೇರಿದಂತೆ ಇತರರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ದೊಡ್ಡ ಮೊತ್ತ ಸಂಗ್ರಹವಾಗುವ ದರ್ಗಾಗಳ ಹುಂಡಿ ಹಣ ಎಣಿಕೆ ಮಾಡಲು ನಮ್ಮ ಸಿಬ್ಬಂದಿ ತೆರಳುತ್ತಾರೆ. ಸಣ್ಣ ದರ್ಗಾಗಳ ಹುಂಡಿ ಎಣಿಕೆ ಕಾರ್ಯ ಆಯಾ ದರ್ಗಾ ಆಡಳಿತ ಮಂಡಳಿಯವರೇ ನಡೆಸುತ್ತಾರೆ. ಇಲ್ಲಿ ವಿವಾದ ಇರುವುದರಿಂದ ಹುಂಡಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಮೌಜಮ್ ಪಾಷಾ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಆಡಳಿತ ಮಂಡಳಿಯವರು ಹಾಗೂ ಆರೋಪ ಮಾಡಿದ ದರ್ಗಾದ ಮುಜಾವರ್‌ ನಡುವೆ ದರ್ಗಾದಲ್ಲಿ ಈಚೆಗೆ ಚರ್ಚೆ ಏರ್ಪಡಿಸಲಾಗಿತ್ತು. ಹುಂಡಿ ಹಣ ದುರುಪಯೋಗ ಮಾಡಿಲ್ಲ ಎಂದು ಆಡಳಿತ ಮಂಡಳಿಯವರು ಹೇಳಿಕೆ ನೀಡಿದ್ದಾರೆ. ಹುಂಡಿಗೆ ಶನಿವಾರ ಬೀಗಮುದ್ರೆ ಹಾಕಲಾಗಿದೆ ಎಂದಿದ್ದಾರೆ.

- - -

-28HRR04:

ಹರಿಹರದ ಹಜರತ್ ನಾಡಬಂದ್ ಷಾವಲಿ ದರ್ಗಾದ ಕಾಣಿಕೆ ಹುಂಡಿಗೆ ಜಿಲ್ಲಾ ವಕ್ಫ್ ಅಧಿಕಾರಿಗಳು ಬೀಗ ಮುದ್ರೆ ಹಾಕಿದರು.