ಸಾರಾಂಶ
ಪಟ್ಟಣ ಪಂಚಾಯಿತಿ ವಿಶೇಷ ಸಭೆಯಲ್ಲಿ ನಿರ್ಧಾರ । 122 ಮಳಿಗೆಗಳ ಬಿಕರಿಗೆ ತೀರ್ಮಾನಕನ್ನಡಪ್ರಭ ವಾರ್ತೆ ಅರಕಲಗೂಡು
ಗುತ್ತಿಗೆ ಅವಧಿ ಮುಗಿದಿರುವ 122 ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ನಡೆಸಲು ಪಟ್ಟಣ ಪಂಚಾಯಿತಿ ವಿಶೇಷ ಸಭೆಯಲ್ಲಿ ನಿರ್ಧರಿಸಲಾಯಿತು.ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಶೇ.18 ರಂತೆ 22 ಮಳಿಗೆಗಳನ್ನು ಹಾಗೂ ಅಂಗವಿಕಲತೆ ಹೊಂದಿದವರಿಗೆ ಒಂದು ಮಳಿಗೆಯನ್ನು ಮೀಸಲಿರಿಸಲು ಲಾಟರಿ ಮೂಲಕ ಆಯ್ಕೆ ನಡೆಸಲಾಯಿತು. ಸಾಮಾನ್ಯ ವರ್ಗಕ್ಕೆ 99 ಮಳಿಗೆಗಳು ಇದ್ದು ಎಲ್ಲ ಮಳಿಗೆಗಳ ಬಹಿರಂಗ ಹರಾಜು ನಡೆಸಲು ಸಭೆ ನಿರ್ಧರಿಸಿತು.
ಪಟ್ಟಣದ ನೀರು ಸರಬರಾಜು ವ್ಯವಸ್ಥೆಯನ್ನು ಉನ್ನತೀಕರಿಸಿ ನಲ್ಲಿಗಳಿಗೆ ಮೀಟರ್ ಅಳವಡಿಸಲು ಕಾರ್ಯ ಯೋಜನೆ ರೂಪಿಸಿದ್ದು, ಇದಕ್ಕೆ 22.46 ಕೋಟಿ ರು. ಹಣ ಮಂಜೂರಾಗಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇಕೆ ಮಂಜುನಾಥ್ ಮಾಹಿತಿ ನೀಡಿದರು.ಅಮೃತ್ 2 ಯೋಜನೆಯಡಿ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗಳನ್ನು ಕೇಂದ್ರ ಸರ್ಕಾರ ನಿರ್ವಹಿಸಲು ಉದ್ದೇಶಿಸಿದ್ದು ಇದಕ್ಕೆ ಅನುಮೋದನೆ ಸಹ ದೊರೆತಿದೆ. ಬಿಡುಗಡೆಯಾದ ಹಣದಲ್ಲಿ ನೀರು ಸರಬರಾಜು ವ್ಯವಸ್ಥೆಯ ಕೊಳವೆಗಳನ್ನು ಬದಲಿಸಿ ನಲ್ಲಿಗಳಿಗೆ ಮೀಟರ್ ಅಳವಡಿಕೆ ನಡೆಸುವುದಾಗಿ ಹೇಳಿದರು.
2024-25ನೇ ಸಾಲಿಗೆ ವಿವಿಧ ಬಾಬ್ತುಗಳಿಗೆ ನಡೆದ ಹರಾಜು ಪ್ರಕ್ರಿಯೆಯ ಅಂತಿಮ ಬಿಡ್ ಅನ್ನು ಸಭೆ ಅನುಮೋದಿಸಿತು. ತಹಸೀಲ್ದಾರ್ ಹಾಗೂ ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ, ಸದಸ್ಯರಾದ ಪ್ರದೀಪ್ ಕುಮಾರ್, ಎಂ.ಕೆ. ಕೃಷ್ಣಯ್ಯ, ನಿಖಿಲ್ ಕುಮಾರ್, ಸುಬಾನ್ ಷರೀಪ್, ಅಬ್ದುಲ್ ಬಾಸಿತ್, ಎಚ್.ಎಸ್.ರಶ್ಮಿ, ಲಕ್ಷ್ಮಿ , ಲಕ್ಷ್ಮಮ್ಮ ಇದ್ದರು.ಅರಕಲಗೂಡು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿಯ ಅವಧಿ ಮುಗಿದಿರುವ ವಾಣಿಜ್ಯ ಮಳಿಗೆಗಳ ಹರಾಜು ಮಾಡಲು ತೀರ್ಮಾನಿಸಲಾಯಿತು. ಅರಕಲಗೂಡು ಅಭಿವೃದ್ಧಿಗೆ 5 ಕೋಟಿ ರು. ಅನುದಾನಕನ್ನಡಪ್ರಭ ವಾರ್ತೆ ಅರಕಲಗೂಡುಕಳೆದ ಎರಡು ವರ್ಷಗಳಲ್ಲಿ ವಿವಿಧ ಇಲಾಖೆಗಳಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 5 ಕೋಟಿ ರು. ಅನುದಾನ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ತಿಳಿಸಿದರು.
ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇವಾಲಯ, ಸಮುದಾಯಭವನ, ರಸ್ತೆ, ಚರಂಡಿ, ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
2023-24 ನೇ ಸಾಲಿನ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಸಾಮಾನ್ಯ ವರ್ಗದ ಅಭಿವೃದ್ಧಿ ಕಾಮಗಾರಿಗಳಿಗೆ 35 ಲಕ್ಷ ರು. ಹಾಗೂ ಪರಿಶಿಷ್ಟ ಜಾತಿ ಅಭಿವೃದ್ಧಿ ಕಾಮಗಾರಿಗಳಿಗೆ 15 ಲಕ್ಷ ರು. ಸೇರಿದಂತೆ 50 ಲಕ್ಷ ರು. ನೀಡಲಾಗಿದೆ ಎಂದರು.ತಮ್ಮ ತಾತ ಎಚ್.ಡಿ.ದೇವೇಗೌಡರು ಹಾಗೂ ತಂದೆ ಎಚ್.ಡಿ.ರೇವಣ್ಣ ಅವರು ತಾಲೂಕಿನ ಅಭಿವೃದ್ಧಿಗೆ ನೆರವಾದಂತೆ ತಾವು ಹಾಗೂ ಪ್ರಜ್ವಲ್ ರೇವಣ್ಣ ಸಹ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.
ಅಗತ್ಯ ಕಾಮಗಾರಿಗಳ ಕುರಿತು ಕಾರ್ಯಕರ್ತರು ಹಾಗೂ ಜನರು ತಿಳಿಸಿದರೆ ಅದಕ್ಕೆ ಅನುದಾನ ಒದಗಿಸುವುದಾಗಿ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಹಾಗೂ ಮತದಾರರು ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಿ ಸಹಕಾರ ನೀಡುವಂತೆ ಮನವಿ ಮಾಡಿದರು.ಅರಕಲಗೂಡು ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಭೂಮಿ ಪೂಜೆ ನೆರವೇರಿಸಿದರು.