ನವದೆಹಲಿಯ ವಸಂತಕುಂಜ್‌ನ ವೇದವ್ಯಾಸ ಗುರುಕುಲದಲ್ಲಿ ನಡೆಯುತ್ತಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ 39 ನೇ ಚಾತುರ್ಮಾಸ್ಯ ವ್ರತದಂಗವಾಗಿ ದೆಹಲಿಯ ತಿರುಮಲ ತಿರುಮತಿ ದೇವಸ್ಥಾನ ಟಿಟಿಡಿಯ ಸಂಯೋಜನೆಯಲ್ಲಿ ಲೋಕಕ್ಷೇಮಾರ್ಥ ವೈಭವದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿತ್ತು.

ಉಡುಪಿ: ನವದೆಹಲಿಯ ವಸಂತಕುಂಜ್‌ನ ವೇದವ್ಯಾಸ ಗುರುಕುಲದಲ್ಲಿ ನಡೆಯುತ್ತಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ 39 ನೇ ಚಾತುರ್ಮಾಸ್ಯ ವ್ರತದಂಗವಾಗಿ ದೆಹಲಿಯ ತಿರುಮಲ ತಿರುಮತಿ ದೇವಸ್ಥಾನ ಟಿಟಿಡಿಯ ಸಂಯೋಜನೆಯಲ್ಲಿ ಲೋಕಕ್ಷೇಮಾರ್ಥ ವೈಭವದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿತ್ತು.

ಸಾವಿರಾರು ಮಂದಿ ಭಕ್ತರು ಈ ಅಪೂರ್ವ ಕಾರ್ಯಕ್ರಮವನ್ನು ಕಂಡು ಹೃನ್ಮನಗಳಲ್ಲಿ ತುಂಬಿಕೊಂಡು ಧನ್ಯರಾದರು.‌ ಡಾ ವಿಠೋಬಾಚಾರ್ಯ ದಂಪತಿ ಸಂಕಲ್ಪ ವಿಧಿ ನೆರೆವೇರಿಸಿ ಕಲ್ಯಾಣೋತ್ಸವದ ಯಜಮಾನಿಕೆಯನ್ನು ವಹಿಸಿದರು. ಸಭಾಂಗಣದ ತುಂಬ ನೆರೆದಿದ್ದ ದೊಡ್ಡ ಸಂಖ್ಯೆಯ ಭಕ್ತರು ಎರಡು ಗಂಟೆಗಳ ಕಾಲ ನಡೆದ ಅಪರೂಪದ ಈ ಉತ್ಸವವನ್ನು ತದೇಕಚಿತ್ತದಿಂದ ಆಸ್ವಾದಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿ, ಇಂದ್ರಪ್ರಸ್ಥದಲ್ಲಿ ನಡೆದ ಈ ಕಾಂಚನಬ್ರಹ್ಮನ ಕಲ್ಯಾಣೋತ್ಸವದಿಂದ ದೇಶಕ್ಕೆ ಸನಾನತ ಧರ್ಮಕ್ಕೆ ಎದುರಾಗಬಹುದಾದ ಸಕಲ ಆಪತ್ತು ವಿಪತ್ತುಗಳೆಲ್ಲ ದೂರವಾಗಿ ಎಲ್ಲೆಡೆ ಸುಖ ಸಮೃದ್ಧಿ ಶಾಂತಿ ನೆಮ್ಮದಿಗಳು ನೆಲೆಗೊಳ್ಳಲಿ ಎಂದು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಭವ್ಯವಾಗಿ ಈ ಕಾರ್ಯಕ್ರಮನವನ್ನು ನೆರವೇರಿಸಿಕೊಟ್ಟ ಟಿಟಿಡಿಯ ಅಧಿಕಾರಿಗಳನ್ನು ಸ್ವಾಮೀಜಿ ಅವರು ಅಭಿನಂದಿಸಿದರು.