ಕನ್ನಡ ಕಡ್ಡಾಯ ಬಳಕೆಗೆ ಕರವೇ ಆಗ್ರಹ

| Published : Jan 21 2024, 01:31 AM IST

ಸಾರಾಂಶ

ಗ್ರಾಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಈ ಕೂಡಲೇ ಕನ್ನಡ ನಿರ್ಲಕ್ಷಿಸಿರುವ ನಾಮಫಲಕಗಳನ್ನು ಈ ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾವೇ ನಾಮಫಲಕಗಳನ್ನು ತೆರವುಗೊಳಿಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಅಂಗಡಿ, ವಾಣಿಜ್ಯ ಕೇಂದ್ರಗಳ ಎದುರು ಕಡ್ಡಾಯ ಕನ್ನಡ ಬಳಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಪಿಡಿಒಗೆ ಮನವಿ ಪತ್ರ ಸಲ್ಲಿಸಿದರು.

ಕರವೇ ಚಿಕ್ಕರಸಿನಕೆರೆ ಹೋಬಳಿ ಘಟಕದ ಅಧ್ಯಕ್ಷ ಬಿ.ರಾಮಚಂದ್ರೇಗೌಡ ಮಾತನಾಡಿ, ಸರ್ಕಾರ ನಾಮ ಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಸುವಂತೆ ಫೆ.28 ವರೆಗೆ ಗಡುವು ನೀಡಿ ಆದೇಶ ಹೊರಡಿಸಿದೆ. ಆದರೆ, ಇಲ್ಲಿ ಶೇ.10 ರಷ್ಟು ಕನ್ನಡ ಭಾಷೆ ಬಳಸದ ನಾಮಫಲಕಗಳಿವೆ ಎಂದು ಆರೋಪಿಸಿದರು.

ಗ್ರಾಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಈ ಕೂಡಲೇ ಕನ್ನಡ ನಿರ್ಲಕ್ಷಿಸಿರುವ ನಾಮಫಲಕಗಳನ್ನು ಈ ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾವೇ ನಾಮಫಲಕಗಳನ್ನು ತೆರವುಗೊಳಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.

ಕರವೇ ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ, ಮದ್ದೂರು ತಾಲೂಕು ಮಹಿಳಾ ಅಧ್ಯಕ್ಷೆ ಪ್ರಭಾವತಿ ಬೋರೇಗೌಡ, ಮುಖಂಡರಾದ ಲೀಲಾ ರಾಮೇಗೌಡ, ರಘು ವೆಂಕಟೇಗೌಡ, ಅರೆಚಾಕನಹಳ್ಳಿ ಕೃಷ್ಣ, ಗುಡಿಗೆರೆ ಕಾಂತರಾಜು, ಕರಡಕೆರೆ ಯೋಗೇಶ್, ಹೊನ್ನಾಯಕನಹಳ್ಳಿ ರಮೇಶ್, ಬಿದರಹೊಸಹಳ್ಳಿ ಹೇಮಾಬೋರೇಗೌಡ, ಮಾದರಹಳ್ಳಿ ಚೌಡೇಗೌಡ, ಕಳ್ಳಿಮೆಳೆದೊಡ್ಡಿ ನಾಗೇಶ್, ಸೇರಿದಂತೆ ಹಲವರಿದ್ದರು.

ಭಾರತೀನಗರ ಗ್ರಾಪಂ ಅಧ್ಯಕ್ಷೆ ಕೌಶಲ್ಯ ಅರ್ಕೇಶ್, ಪಿಡಿಓ ಎನ್.ಸುಧಾ ಅವರಿಗೆ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.