ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗಳಿಗೆ ನೀರು ಹರಿಸಲು ಆಗ್ರಹ

| Published : Oct 10 2024, 02:21 AM IST

ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗಳಿಗೆ ನೀರು ಹರಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಎಡದಂಡೆ ನಾಲೆಯ (ಟಿಎಲ್‌ಬಿಸಿ) 82 ನೇ ವಿತರಣಾ ಕಾಲುವೆ ಗವಿಗಟ್ಟ, ಜಾನೇಕಲ್ ಅಮರಾವತಿ, ಆಲ್ದಾಳ ಗ್ರಾಮದ ಉಪಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಆಗ್ರಹಿಸಿ ರೈತರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡು ಸಂಚಾರ ತಡೆ ಮಾಡಿ ಬುಧವಾರ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಸಿರವಾರ

ತುಂಗಭದ್ರಾ ಎಡದಂಡೆ ನಾಲೆಯ (ಟಿಎಲ್‌ಬಿಸಿ) 82 ನೇ ವಿತರಣಾ ಕಾಲುವೆ ಗವಿಗಟ್ಟ, ಜಾನೇಕಲ್ ಅಮರಾವತಿ, ಆಲ್ದಾಳ ಗ್ರಾಮದ ಉಪಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಆಗ್ರಹಿಸಿ ರೈತರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡು ಸಂಚಾರ ತಡೆ ಮಾಡಿ ಬುಧವಾರ ಪ್ರತಿಭಟಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಭಾಗವಹಿಸಿ ಮಾತನಾಡಿ, ಕಡಿಮೆ ನೀರಿನ ಬೆಳೆಗಳಾದ ಹತ್ತಿ, ಜೋಳ, ಭತ್ತದ ಬೆಳೆಗಳು ನೀರು ಬಾರದೆ ಒಣಗುತ್ತಿವೆ ಎಂದರು.

ಕೆಳ ಭಾಗದ ರೈತರ ಹೊಲ ಗದ್ದೆಗಳ ಮುಂಗಾರು ಬೆಳೆಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಮಳೆ ಅಭಾವದಿಂದ ರೈತರು ಸಾಲ ಮಾಡಿ ಬೆಳೆದ ಬೆಳೆಗಳು ಒಣಗುತ್ತಿವೆ. ಇದರಿಂದ ರೈತರಿಗೆ ತುಂಬಾ ನಷ್ಟ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ಅಧಿಕಾರಿಗಳು ಅಕ್ರಮ ನೀರಾವರಿ ತಡೆಯುವಲ್ಲಿ ವಿಫಲವಾಗಿದ್ದಾರೆ. ರೈತರಿಗೆ ಸಮರ್ಪಕವಾಗಿ ನೀರು ಹರಿಸುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.ಅರ್ಧಗಂಟೆಗೂ ಹೆಚ್ಚುಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ತಹಸೀಲ್ದಾರ್ ರವಿ ಎಸ್. ಅಂಗಡಿ ಭೇಟಿ ನೀಡಿ ಕಾಲುವೆಗಳನ್ನು ವೀಕ್ಷಣೆ ಮಾಡಿ, ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನೀರು ಹರಿಸುವ ಭರವಸೆ ನೀಡಿದ ನಂತರ ರೈತರು ಸಂಚಾರ ತಡೆ ಹೋರಾಟ ಹಿಂಪಡೆದರು.

ನಂತರ ನೀರಾವರಿ ಇಲಾಖೆ ಆವರಣದಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಸೂಗುರಯ್ಯ ಆರ್.ಎಸ್. ಮಠ, ಬಸವರಾಜ ಮಾಲಿ ಪಾಟೀಲ, ಲಿಂಗರೆಡ್ಡಿ, ಶಂಕರಗೌಡ ದೇವತಗಲ್, ಬಸವರಾಜ ನವಲಕಲ್ಲು, ನೀಲಪ್ಪಗೌಡ ಜಾನೇಕಲ್ ಸೇರಿ ನೂರಾರು ರೈತರು ಭಾಗವಹಿಸಿದ್ದರು.