ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ತಾಲೂಕಿನ ಅರೆಮಲೆನಾಡು ಎಂದು ಪ್ರಸಿದ್ಧಿ ಪಡೆದ ಗಿಣಿ ವಜ್ರ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿ ಪ್ರಾಣಿ ಸಂಗ್ರಹಾಲಯದೊಂದಿಗೆ ಪ್ರವಾಸಿ ತಾಣ ಅಭಿವೃದ್ಧಿ ಮಾಡುವ ಯೋಜನೆ ಇದೆ ಎಂದು ಶಾಸಕ ಸಿ. ಬಿ .ಸುರೇಶ್ ಬಾಬು ತಿಳಿಸಿದರು .ತಾಲೂಕಿನ ಹೊನ್ನೇ ಬಾಗಿ ಪಂಚಾಯಿತಿ ಹೊಸಳ್ಳಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಮನೆ ಮಗ ಶೀರ್ಷಿಕೆಯಡಿ ನಡೆದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇದುವರೆಗೆ 85 ಜನ ಸ್ಪಂದನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಕಾರಣಕ್ಕೆ ವೃದ್ಯಾಪ್ಯ ವೇತನವ ಸೇರಿದಂತೆ ಇತರೆ ಯೋಜನೆಗಳ ಅರ್ಜಿಗಳೇ ಇಲ್ಲದಾಗಿದೆ. ಪ್ರತಿ ಸಭೆಯಲ್ಲೂ ಬಂದಂತಹ ಅರ್ಜಿಗಳನ್ನು ನಾನೇ ಪರಿಶೀಲಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನೀಡಿ, ನಿಗದಿತ ಸಮಯದಲ್ಲಿ ಪರಿಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇವರಿಗೆ ಈ ಕಾರ್ಯಕ್ರಮದಡಿ ಬಂದ ಅರ್ಜಿಗಳೆಷ್ಟು, ಬಗೆಹರಿಸಿದವರುಗಳೆಷ್ಟು, ಉಳಿಕೆಗೆ ಉಳಿಕೆ ಗಳಾವುವು ಎಂಬ ಮಾಹಿತಿಯ ಪುಸ್ತಕವನ್ನು ಬಿಡುಗಡೆ ಗೊಳಿಸಲಾಗುವುದು. ನಮ್ಮ ಜನಸ್ಪಂದನ ಬಗೆಗಿನ ಟೀಕೆಗೆ ಈ ಪುಸ್ತಕ ಉತ್ತರ ನೀಡಲಿದೆ ಎಂದರು.
ಮನೆ ಬಾಗಿಲಿಗೆ ಮನೆ ಮಗ ಕಾರ್ಯಕ್ರಮದ ಸಂದರ್ಭದಲ್ಲಿ ಗ್ರಾಮದ ಜನ ನೇರವಾಗಿ ನಿಮ್ಮ ಸಮಸ್ಯೆಗಳನ್ನು ನನ್ನ ಬಳಿಗೆ ತನ್ನಿ, ಇಲ್ಲಿ ಪಕ್ಷತೀತ ಜಾತ್ಯತೀತದಡಿ ಸಾಮಾಜಿಕ ಮನೋಭಾವದಿಂದ ನಿಮ್ಮಲ್ಲಿಗೆ ಬಂದಿದ್ದೇವೆ. ಇದರ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯಿರಿ ಎಂದರು.ಹಿಂದುಳಿದ ಪಟ್ಟ ಹೊತ್ತ ಈ ತಾಲೂಕಿನಲ್ಲಿ ಶೈಕ್ಷಣಿಕವಾಗಿ ನಾವು ಸಾಧನೆ ಮಾಡಿದ್ದೇವೆ, ಸ್ಥಳೀಯ ನುಡಿದ ಶಿಕ್ಷಕರ ತಂಡದಿಂದ ಪ್ರೇರಣಾ ಶಿಬಿರಗಳನ್ನು ಸತತವಾಗಿ ನಡೆಸಿದ ಪರಿಣಾಮ ಕಳೆದೆರಡು ವರ್ಷಗಳಿಂದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಯಶಸ್ವಿಯಾಗಿದ್ದು ಈ ಸಾಧನೆ ಮುಂದುವರೆಯಲಿದೆ. ಗಣಿ ಬಾಧಿತ ಅನುದಾನದಲ್ಲಿ ಈ ಭಾಗದಲ್ಲಿ ಉತ್ತಮ ರಸ್ತೆಗಳಾಗುತ್ತಿದೆ. ಅರೆ ಮಲೆನಾಡಿನ ಈ ಪ್ರದೇಶ ಈಗಾಗಲೇ ಪ್ರವಾಸಿಗರ ತಾಣವಾಗಿರುವುದನ್ನು ಮನಗಂಡು ಈ ಭಾಗದಲ್ಲಿ ಸಾಧು ಪ್ರಾಣಿಗಳ ಸಂಗ್ರಹಾಲಯದ ಮೂಲಕ ಸುತ್ತಮುತ್ತಲಿನ ಆಕರ್ಷಕ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸುವಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಟಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಚ್. ಆರ್ ಶಶಿಧರ್ ಮಾತನಾಡಿ 224 ಕೇಂದ್ರಗಳಲ್ಲಿ, ಈ ಕಾರ್ಯಕ್ರಮ ಮಾಡುತ್ತಿರುವುದು ನಮ್ಮ ಶಾಸಕರ ಸಾಧನೆ ಒಬ್ಬ ಶಾಸಕರು ಒಂದು ಜನಸ್ಪಂದನ ಮಾಡಬಹುದು. ಆದರೆ ನಮ್ಮ ಕ್ಷೇತ್ರದಲ್ಲಿ ಇದುವರೆಗೂ 85ಕ್ಕೂ ಹೆಚ್ಚು ಜನಸ್ಪಂದನ ಕಾರ್ಯಕ್ರಮವನ್ನು ಮನೆ ಬಾಗಿಲಿಗೆ ಮನೆ ಮಗ ಕಾರ್ಯಕ್ರಮದೊಂದಿಗೆ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತಿದ್ದಾರೆ. ಕೆಲವರು ಶಾಸಕರು ಜನರ ಕೈಗೆ ಸಿಗುವುದಿಲ್ಲ. ಆದರೆ ನಮ್ಮ ಶಾಸಕರು ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುತ್ತಾರೆ. ಇವರ ಈ ಕೆಲಸದ ಬಗ್ಗೆ ಕೆಲವರು ಮಾಧ್ಯಮಗಳಲ್ಲಿ ಟೀಕೆ ಮಾಡುವುದನ್ನು ಬಿಡಬೇಕು. ರಾಜಕೀಯ ಮಾಡುವ ವೇಳೆ ರಾಜಕೀಯ ಮಾಡಲಿ ಆದರೆ ಇದರಲ್ಲಿ ಕ್ಷುಲ್ಲಕ ರಾಜಕೀಯ ಮಾಡುವುದು ತರವಲ್ಲ. ನಿಮ್ಮ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರುವುದರ ಮೂಲಕ ಬಗೆಹರಿಸಿಕೊಳ್ಳಿ ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಳ್ಳಿ ಎಸ್.ಆರ್. ರಾಜಕುಮಾರ ಮಾತನಾಡಿ, ನಮ್ಮ ತಾಲೂಕು ಮೂರು ಜಿಲ್ಲೆಗಳ ಗಡಿಯಾಗಿದೆ. ಈ ರೀತಿಯ ಕಾರ್ಯಕ್ರಮಗಳು ಗಡಿ ಗ್ರಾಮಕ್ಕೆ ತಲುಪುವುದರಿಂದ ಜನರ ಕಷ್ಟ ಸುಖಗಳನ್ನು ತಿಳಿಯಬಹುದಾಗಿದೆ. ಕೇವಲ ಚುನಾವಣೆಯ ವೇಳೆ ಮಾತ್ರ ಗ್ರಾಮಗಳಿಗೆ ಭೇಟಿ ನೀಡುವ ಶಾಸಕರೇಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುವ ನಮ್ಮ ಶಾಸಕರು ಜನಪರ ಕಾಳಜಿ ಉಳ್ಳವರಾಗಿದ್ದಾರೆ. ಈ ರೀತಿ ಗ್ರಾಮಕ್ಕೆ ಬಂದಾಗ ಪ್ರತಿಯೊಬ್ಬರ ಸಮಸ್ಯೆ ಮುಖ್ಯವಾಗುತ್ತದೆ. ಉದಾಹರಣೆಗೆ, ಬರಶಿಡ್ಲಹಳ್ಳಿ ಯಲ್ಲಿ ಹಲವು ವರ್ಷಗಳಿಂದ ಉಳಿದಿದ್ದ ರಸ್ತೆಯ ಸಮಸ್ಯೆ ಈ ಕಾರ್ಯಕ್ರಮದ ಮೂಲಕ ಬಗೆಹರಿಯಯಿತು. ಇದರೊಂದಿಗೆ ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸುವುದರಿಂದ ಅವರಿಗೆ ನೈಜ ಸಮಸ್ಯೆಗಳ ಅರಿವಾಗುತ್ತದೆ ಎಂದರು.
ಹೊನ್ನೇ ಬಾಗಿ ಗ್ರಾಮ ಪಂಚಾಯಿತಿಯಲ್ಲಿ ನಡೆದ 19 ನೇ ವಾರದ ಮನೆ ಬಾಗಿಲಿಗೆ ಮನೆ ಮಗ ಶೀರ್ಷಿಕೆಯ ಜನಸ್ಪಂದನ ಕಾರ್ಯಕ್ರಮಗಳು ಹೊಸಹಳ್ಳಿ, ಭಾವನಹಳ್ಳಿ, ಕಾಡನಹಳ್ಳಿ, ಬುಲೆನಹಳ್ಳಿ, ಹೊನ್ನೇಬಾಗಿ, ಮಾರಸಂದ್ರ, ಮೇಲನಹಳ್ಳಿ ಗ್ರಾಮಗಳಲ್ಲಿ ನಡೆಯಿತು. ಈ ವೇಳೆ ನಿವೇಶನಕ್ಕಾಗಿ, ಮನೆ ಮಂಜೂರಾತಿಗಾಗಿ, ರಸ್ತೆ ದುರಸ್ತಿಗಾಗಿ, ಸ್ಮಶಾನಕ್ಕಾಗಿ, ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ, ಖಾತೆ ಬದಲಾವಣೆಗಾಗಿ, ಇದರೊಂದಿಗಿನ ದುರ್ಗದ ಕೆರೆ ಸೇರಿದಂತೆ ಇತರರಿಗೆ ಕೆರೆಗಳಿಗೆ ವಿವಿಧಾವರಿ ಯೋಜನೆಗಳ ಮೂಲಕ ನೀರನ್ನು ಹರಿಸುವಂತೆ ಸಾರ್ವಜನಿಕರು ಶಾಸಕರನ್ನು ಒತ್ತಾಯಿಸಿದರು.ಸಭೆಯಲ್ಲಿ ಹೊನ್ನೆಬಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ, ಉಪಾಧ್ಯಕ್ಷೆ ಪಲ್ಲವಿ ಬಿ.ಆರ್, ತಹಸೀಲ್ದಾರ್ ಕೆ.ಪುರಂದರ, ದೊಡ್ಡ ಸಿದ್ದಯ್ಯ ಸಿ.ಡಿ.ಪಿ.ಓ. ಹೊನ್ನಪ್ಪ, ಎಇ ತಿಮ್ಮಯ್ಯ, ಮಾರುತಿ ವಿಡಿಯೋ ಭೈರಪ್ಪ, ಸೇರಿದಂತೆ ಹೊನ್ನೆದಾಗಿ ಗ್ರಾಮ ಪಂಚಾಯಿತಿ ಸದಸ್ಯರು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))