ಸಾರಾಂಶ
ಕಾಂಗ್ರೆಸ್ ಪಕ್ಷದಲ್ಲಿ 10 ಮಂದಿ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ಇದ್ದಾರೆ. ಅದರಲ್ಲಿ ಡಿ.ಕೆ. ಶಿವಕುಮಾರ್ ಕೂಡ ಗಟ್ಟಿ ಮನುಷ್ಯ, ಪಕ್ಷ ಕಟ್ಟಿದ್ದು, ಅವರು ಮುಖ್ಯಮಂತ್ರಿಯಾದರೆ ಖುಷಿ ಪಡುವುದರಲ್ಲಿ ನಾನೂ ಒಬ್ಬ - ಛಲವಾದಿ ನಾರಾಯಣಸ್ವಾಮಿ
ರಾಮನಗರ: ಕಾಂಗ್ರೆಸ್ ಪಕ್ಷದಲ್ಲಿ 10 ಮಂದಿ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ಇದ್ದಾರೆ. ಅದರಲ್ಲಿ ಡಿ.ಕೆ. ಶಿವಕುಮಾರ್ ಕೂಡ ಗಟ್ಟಿ ಮನುಷ್ಯ, ಪಕ್ಷ ಕಟ್ಟಿದ್ದು, ಅವರು ಮುಖ್ಯಮಂತ್ರಿಯಾದರೆ ಖುಷಿ ಪಡುವುದರಲ್ಲಿ ನಾನೂ ಒಬ್ಬ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮತ್ತು ಡಿಕೆ ಶಿವಕುಮಾರ್ ಬಹಳ ಆತ್ಮೀಯರು. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೀವಿ. ಅವರು ಮುಖ್ಯಮಂತ್ರಿಯಾದರೆ ನಮಗೇನಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯನ್ನು ಏಳೂವರೆ ವರ್ಷಗಳ ಕಾಲ ನಿಭಾಯಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಅಭ್ಯಂತರ ಇಲ್ಲ. ಜಿ. ಪರಮೇಶ್ವರ್ ಅವರಾದರೆ ಇನ್ನೂ ಸಂತೋಷ. ದಲಿತರೊಬ್ಬರು ಮುಖ್ಯಮಂತ್ರಿ ಆದರೆಂಬ ಖುಷಿ. ಆದರೆ, ದಲಿತರಿಗೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆ ಕೊಡುವುದಿಲ್ಲ ಎಂದು ಹೇಳಿದರು.
ದಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಹುಲಿ ಅಂತಾ ಕರೆಯುತ್ತಿದ್ದರು
ಮೈಸೂರು ಭಾಗದಲ್ಲಿ ದಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಹುಲಿ ಅಂತಾ ಕರೆಯುತ್ತಿದ್ದರು. ಆದರೆ, ಪ್ರಿಯಾಂಕ್ ಖರ್ಗೆ ಅವರು ಶ್ರೀನಿವಾಸ್ ಪ್ರಸಾದ್ ಅವರನ್ನೇ ಬಲಿ ಪಡೆದು ಸಚಿವರಾದರು. 2013ರಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆರವರ ಹೆಸರು ಮೊದಲಿತ್ತು. ನಾನು ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಟೆಂಟ್ ಹಾಕಿಕೊಂಡು ಹೋರಾಟ ಮಾಡಿದ್ದೆ. ಆದರೆ, ಮಹದೇವಪ್ಪ ಮತ್ತು ಸಿದ್ದರಾಮಯ್ಯ ಪಿತೂರಿ ಮಾಡಿ ಪ್ರಿಯಾಂಕ್ ಖರ್ಗೆ ಅವರಿಗೆ, ನಿನ್ನನ್ನು ಮಂತ್ರಿ ಮಾಡುತ್ತೇವೆ ಅಂತಾ ಆಸೆ ತೋರಿಸಿದರು. ಹೀಗಾಗಿ ಅಪ್ಪನನ್ನು ಬಲಿ ತೆಗೆದುಕೊಂಡು ಮಗ ಮಂತ್ರಿಯಾಗಿದ್ದಾನೆ ಎಂದರು.
ಈಗ ಯತೀಂದ್ರ ಸಿದ್ದರಾಮಯ್ಯ ನಮ್ಮ ಅಪ್ಪಂದು ಕೊನೆ ಘಳಿಗೆ ಅನ್ನುತ್ತಿದ್ದಾರೆ
ಈಗ ಯತೀಂದ್ರ ಸಿದ್ದರಾಮಯ್ಯ ನಮ್ಮ ಅಪ್ಪಂದು ಕೊನೆ ಘಳಿಗೆ ಅನ್ನುತ್ತಿದ್ದಾರೆ. ಸಿದ್ದರಾಮಯ್ಯನವರು ನನಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಅಂತಿದ್ದರು. ಈಗ ಭ್ರಷ್ಟಾಚಾರದಲ್ಲಿ ಕರಿ ಕಾಗೆ ಆಗಿದ್ದು, ಕಪ್ಪು ಚುಕ್ಕೆ ಎಲ್ಲಿ ಹುಡುಕುವುದು, ಯಾವ ಘನಕಾರ್ಯಕ್ಕೆ ಏಳೂವರೆ ವರ್ಷದಿಂದ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿದ್ದೀರಿ ಎಂದು ಕಾಂಗ್ರೆಸ್ ವರಿಷ್ಠರನ್ನು ಪ್ರಶ್ನೆ ಮಾಡಿದರು.
ಕೈ ಸರ್ಕಾರ ಬಂದ ಮೇಲೆ ದರಿದ್ರ ಬಂದಿದೆ :
ಪುಂಡರು ಮನೆಗೆ ನುಗ್ಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೈಸೂರಿನಲ್ಲಿ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಆಗಿತ್ತು. ಆದರೆ, ಕಾಂಗ್ರೆಸ್ ನೋಡಿ ನೋಡದಂತಿರುವ ಕಳ್ಳಪಕ್ಷವಾಗಿದೆ. ಅಂಗನವಾಡಿ ಸಹಾಯಕಿಯರು ಮತ್ತು ಗ್ರಂಥಪಾಲಕರಿಗೆ ವೇತನ ಪಾವತಿಯಾಗಿಲ್ಲ. ಚಾಮರಾಜನಗರಲ್ಲಿ ನೀರು ಗಂಟಿಯೊಬ್ಬನಿಗೆ 27 ತಿಂಗಳಿಂದ ಸಂಬಳ ಹಾಕಿರಲಿಲ್ಲ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ದರಿದ್ರ ಬಂದಿದೆ ಎಂದು ಟೀಕಿಸಿದರು.
ರಾಜ್ಯದ ಜನರು ಸರ್ಕಾರದ ವಿರುದ್ಧ ಕುಪಿತಗೊಂಡು ಶಾಪ ಹಾಕುತ್ತಿದ್ದಾರೆ. ರಸ್ತೆಗಳು ಹದಗೆಟ್ಟಿದ್ದು, ಗರ್ಭಿಣಿಯರಿಗೆ ರಸ್ತೆಯಲ್ಲಿಯೇ ಹೆರಿಗೆಯಾಗುವ ಸ್ಥಿತಿಯಿದೆ. ಸಚಿವರು, ಶಾಸಕರು ತಮ್ಮ ಕ್ಷೇತ್ರಗಳಿಗೆ ಹೋಗುತ್ತಿಲ್ಲ. ಜನರ ಅಹವಾಲು ಸ್ವೀಕರಿಸುತ್ತಿಲ್ಲ. ಇನ್ನೂ ಎರಡು ವರ್ಷ ರಾಜ್ಯದ ಜನರು ಇದನ್ನೆಲ್ಲಾ ತಡೆದುಕೊಳ್ಳಬೇಕಲ್ಲಾ ಅನ್ನೋದೇ ನನಗಿರುವ ನೋವು. ಕಾಂಗ್ರೆಸ್ ಸರ್ಕಾರ ಹೊಣೆಗೇಡಿತನವನ್ನು ಪ್ರದರ್ಶಿಸುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ರುದ್ರಯ್ಯ, ಸುರೇಶ್, ಹಾರೋಹಳ್ಳಿ ಚಂದ್ರು ಮತ್ತಿತರರು ಇದ್ದರು.
ಭೀಮ್ ಆರ್ಮಿ ಹೋರಾಟಕ್ಕೆ ನಾರಾಯಣಸ್ವಾಮಿ ಟಾಂಗ್
ರಾಮನಗರ: ಮಲ್ಲಿಕಾರ್ಜುನ ಖರ್ಗೆ ಕುಟುಂಬ ದಲಿತ ಸಂಘಟನೆಗಳನ್ನು ದೂರವಿಟ್ಟು, ಎಲ್ಲೋ ಇದ್ದ ಭೀಮ್ ಆರ್ಮಿ ಅನ್ನೋ ಸಂಘಟನೆಯನ್ನು ಉದ್ಭವ ಮಾಡಿ ಅವರದ್ದೇ ಚೇಲಾಗಳನ್ನು ಅದರಲ್ಲಿ ಬಿಟ್ಟು ಹೋರಾಟಕ್ಕೆ ಕಳುಹಿಸುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದಲಿತರ ವಿರೋಧಿಯಾಗಿದ್ದು, ಅದು ಯಾವತ್ತೂ ನಿಮ್ಮ ಅಭ್ಯುದಯವನ್ನು ಬಯಸೋದಿಲ್ಲ ಅಂತಾ ಬಾಬಾಸಾಹೇಬರೇ ಹೇಳಿದ್ದರು. ಹೀಗಾಗಿ ಕಳೆದ 70 ವರ್ಷಗಳಿಂದ ದಲಿತರು ದಲಿತ ಸಂಘರ್ಷ ಸಮಿತಿಯನ್ನು ರಚಿಸಿಕೊಂಡು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ, ಒಂದು ದಿವಸ ಕೂಡ ಖರ್ಗೆ ಕುಟುಂಬ ದಲಿತರ ಹೋರಾಟದಲ್ಲಿ ಭಾಗಿಯಾಗಿಲ್ಲ. ಬದಲಾಗಿ ದಲಿತರ ಸಂಘಟನೆಗಳನ್ನು ಒಡೆಯಲು, ಅವುಗಳನ್ನು ಛಿದ್ರಗೊಳಿಸಲು ಕಾರಣವಾಗಿದ್ದಾರೆ ಎಂದು ದೂರಿದರು.
ಖರ್ಗೆ ಕುಟುಂಬದವರು ದಲಿತರನ್ನು ಹತ್ತಿರವೂ ಸೇರಿಸಿಕೊಳ್ಳುತ್ತಿರಲಿಲ್ಲ. ಈಗ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ವಿಚಾರವನ್ನು ಮುನ್ನಲೆಗೆ ತಂದು ಇರಲಾರದೇ ಇರುವೆ ಬಿಟ್ಟುಕೊಂಡರು ಎನ್ನುವ ಪರಿಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಅವರ ಕೈಬಿಟ್ಟಿದ್ದಾರೆ. ಹೀಗಾಗಿ ಅವರಿಗೆ ಈಗ ದಲಿತರು ನೆನಪಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಐ ಲವ್ ಡಿಎಸ್ಎಸ್, ಆರ್ಎಸ್ಎಸ್:
ನಾನು ದಲಿತ ಸಂಘರ್ಷ ಸಮಿತಿಯನ್ನು ಪ್ರೀತಿಸುತ್ತೇನೆ. ಯಾಕೆಂದರೆ ಅದು ದಲಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದೆ. ಅದೇ ರೀತಿ ನಾನು ಆರ್ ಎಸ್ ಎಸ್ ಅನ್ನು ಸಹ ಪ್ರೀತಿಸುತ್ತೇನೆ. ಯಾಕಂದರೆ ಆರ್ ಎಸ್ ಎಸ್ ಯಾರಿಗೂ ಉಪದ್ರವ ಕೊಡುವ ಸಂಘಟನೆಯಲ್ಲ. ಅಂಬೇಡ್ಕರ್ ಕೂಡ ಯಾವತ್ತೂ ಆರ್ ಎಸ್ ಎಸ್ ಸಂಘಟನೆಯನ್ನು ವಿರೋಧಿಸಿರಲಿಲ್ಲ ಎಂದು ಛಲವಾಡಿ ನಾರಾಯಣಸ್ವಾಮಿ ಹೇಳಿದರು.
ಕಾಂಗ್ರೆಸ್ ನಲ್ಲಿರುವ ಎರಡು-ಮೂರು ಕುಟುಂಬಗಳು ದಲಿತರ ಸೌಲಭ್ಯಗಳನ್ನೆಲ್ಲಾ ನುಂಗಿ ಬಲಿತರಾಗಿವೆ. ಮಲ್ಲಿಕಾರ್ಜುನ್ ಖರ್ಗೆಯವರು ಗುರುಮಿಠಕಲ್ ನಿಂದ 9 ಬಾರಿ ಗೆದ್ದಿದ್ದಾರೆ. ಆದರೆ ಅಲ್ಲಿ ಒಬ್ಬನೇ ಒಬ್ಬ ದಲಿತ ನಾಯಕನನ್ನು ಬೆಳೆಸಿಲ್ಲ. ಬೇರೆಯವರನ್ನು ಬೆಳೆಸಿದರೆ ತಮಗೆ ಮುಂದೆ ತೊಂದರೆಯಾಗಬಹುದು ಅನ್ನುವ ಕಾರಣಕ್ಕೆ ಯಾರನ್ನೂ ಬೆಳೆಸಿಲ್ಲ. ನಾನೂ ಕೂಡ ಅವರ ಜತೆ ಇದ್ದೆ. ಸಮಾಧಿಯಾಗೋದಕ್ಕೂ ಮುನ್ನ ಬಿಜೆಪಿ ಬಂದು ಸೇರಿ ಬದುಕಿಕೊಂಡಿದ್ದೇನೆ. ದಲಿತರು ಮನೆಗೆ ಬಂದರೆ ಖರ್ಗೆ ಹೇಗೆ ನಡೆದುಕೊಳ್ಳುತ್ತಿದ್ದರು ಅನ್ನೋದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಆದರೆ ಈಗ ದಲಿತರ ನೆನಪು ಬಂದಿದೆ. ಇದೆಲ್ಲಾ ಗೊತ್ತಿದ್ದೂ ದಲಿತರು ಏನಾದರೂ ಕಾಂಗ್ರೆಸ್ ಪರವಾಗಿ ನಿಂತರೆ ಅಂಬೇಡ್ಕರ್ ವಿರೋಧಿಗಳಾಗುತ್ತಿರೆಯೇ ಹೊರತು ಅವರ ಅನುಯಾಯಿಗಳಾಗುವುದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು
)
;Resize=(128,128))
;Resize=(128,128))
;Resize=(128,128))
;Resize=(128,128))