ಬೆಂಕಿ ಹೊತ್ತಿಕೊಂಡು ಎಲೆಕ್ಟ್ರಿಕ್‌ ಸ್ಕೂಟರ್‌ ಭಸ್ಮ

| Published : Jun 27 2024, 01:03 AM IST

ಬೆಂಕಿ ಹೊತ್ತಿಕೊಂಡು ಎಲೆಕ್ಟ್ರಿಕ್‌ ಸ್ಕೂಟರ್‌ ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಕಾಏಕಿ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತು. ಪರಿಸರದ ಜನ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದೇ ಸ್ಕೂಟಿ ಪೂರ್ಣ ಸುಟ್ಟು ಭಸ್ಮವಾಯಿತು.

ಬೆಳ್ತಂಗಡಿ: ಉಜಿರೆಯ ಲಲಿತನಗರ ಕಡಂಬಾರ್ ಗೇಟ್ ಬಳಿ ಎಲೆಕ್ಟ್ರಿಕ್ ಓಕಿನಾವಾ ಸ್ಕೂಟಿಯೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡು ಸುಟ್ಟು ಭಸ್ಮವಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಸವಾರ ಪ್ರಕಾಶ್ ರಾವ್ ಅಪಾಯದಿಂದ ಪಾರಾಗಿದ್ದಾರೆ.

ಮನೆಯಿಂದ ಧರ್ಮಸ್ಥಳಕ್ಕೆ ಕಾರ್ಯನಿಮಿತ್ತ ತೆರಳುತ್ತಿದ್ದ ಅವರು ಕೆಲವೇ ಕ್ಷಣದಲ್ಲಿ ಸ್ಕೂಟಿಯಲ್ಲಿ ಹೊಗೆ ಬರಲಾರಂಭಿಸಿದಾಗ ನಿಲ್ಲಿಸಿ ಕೆಳಗಿಳಿದರು. ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತು. ಪರಿಸರದ ಜನ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದೇ ಸ್ಕೂಟಿ ಪೂರ್ಣ ಸುಟ್ಟು ಭಸ್ಮವಾಯಿತು. ಬೆಂಕಿಗೆ ಕಾರಣ ತಿಳಿದುಬಂದಿಲ್ಲ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.