ಬಾಳಿಗೆ ಬೆಳಕಾದ ಪರಿಸರ

| Published : Jun 16 2025, 04:19 AM IST

ಸಾರಾಂಶ

ಪರಿಸರದಿಂದಲೇ ನಾವು ಬದುಕುತ್ತಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾನವ ತನ್ನ ಲಾಭಕ್ಕಾಗಿ ಪರಿಸರವನ್ನೇ ಹಾಳು ಮಾಡಲಾರಂಭಿಸಿದ್ದಾನೆ

ಕನಕಗಿರಿ: ಪರಿಸರ ನಮ್ಮೆಲ್ಲರ ಬಾಳಿಗೆ ಬೆಳಕಾಗಿದ್ದು, ಪ್ರತಿಯೊಬ್ಬರು ಕಂಕಣ ಬದ್ಧರಾಗಿರಿ ಕೆಲಸ ಮಾಡಿದಾಗ ಮಾತ್ರ ಪ್ರಕೃತಿ ಸಂರಕ್ಷಣೆಯಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಎನ್. ಗಂಗಾಧರ ಹೇಳಿದರು.

ತಾಲೂಕಿನ ಮುಸಲಾಪೂರ ಗ್ರಾಮದ ಜ್ಯೋತಿ ಪಬ್ಲಿಕ್ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆ ಹಾಗೂ ವಿವಿಧ ಪ್ರಬೇಧದ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪರಿಸರದಿಂದಲೇ ನಾವು ಬದುಕುತ್ತಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾನವ ತನ್ನ ಲಾಭಕ್ಕಾಗಿ ಪರಿಸರವನ್ನೇ ಹಾಳು ಮಾಡಲಾರಂಭಿಸಿದ್ದಾನೆ.ಇದು ಮುಂದುವರಿದರೆ ಮಾನವನಿಗೆ ಆಪತ್ತು ಎದುರಾಗಲಿದೆ ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಬಸವರಾಜ, ಪರಿಸರ ಸಂರಕ್ಷಣೆ, ಮದ್ಯವರ್ಜನೆ, ವಿವಿಧ ರೀತಿಯ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಸೇರಿದಂತೆ ನಾನಾ ಸಾಮಾಜಿಕ ಕಾರ್ಯಗಳ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಾಡಿನಾದ್ಯಂತ ಹೆಸರಾಗಿದೆ.ಶಾಲೆಯ ಸುತ್ತ-ಮುತ್ತ ನಾಟಿ ಮಾಡಲು ವಿವಿಧ ರೀತಿಯ ಸಸಿ ವಿತರಿಸಿದ್ದು, ಇವುಗಳ ಪಾಲನೆ, ಪೋಷಣೆಗೆ ಮುಂದಾಗಿ ಪ್ರಕೃತಿ ಬೆಳೆಗಿಸುತ್ತೇವೆ ಎಂದರು.

ವಲಯದ ಮೇಲ್ವಿಚಾರಕ ಯಲ್ಲಾರಿ ಶಿವಾಜಿ, ಸೇವಾ ಪ್ರತಿನಿಧಿ ಸರಸ್ವತಿ, ಶಿವಕುಮಾರ, ಶಿಕ್ಷಕರು ಹಾಗೂ ಮಕ್ಕಳು ಇದ್ದರು.