ಸಾರಾಂಶ
ಪರಿಸರದ ಉಳಿವಿಗೆ ಪ್ರತಿಯೊಬ್ಬರು ಮುಂದಾದರೆ ಆಮ್ಲಜನಕ, ಕಾಲ-ಕಾಲಕ್ಕೆ ಮಳೆಯಾಗುವುದು ಸೇರಿದಂತೆ ಮನುಷ್ಯನಿಗೆ ನೈಸರ್ಗಿಕವಾಗಿ ಸಂಪನ್ಮೂಲ ಸಿಗಲಿದೆ.
ಕನಕಗಿರಿ:
ಗಿಡ ನೆಟ್ಟು ಪೋಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂದು ಶಿರಸ್ತೇದಾರ ಅನಿತಾ ಇಂಡಿ ಹೇಳಿದರು.ಇಲ್ಲಿನ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಟ್ಟು ಮಾತನಾಡಿದರು. ಪರಿಸರ ನಮಗೆ ಉಸಿರಾಗಿದೆ. ಗಿಡ-ಮರಗಳಿಲ್ಲದೆ ಮಾನವ ಜೀವಿಸಲಾರ. ಮನುಷ್ಯ ಪ್ರಕೃತಿಯ ಭಾಗವಾಗಿ ಬದುಕುತ್ತಾನೆ ಎಂದ ಅವರು, ಪರಿಸರದ ಉಳಿವಿಗೆ ಪ್ರತಿಯೊಬ್ಬರು ಮುಂದಾದರೆ ಆಮ್ಲಜನಕ, ಕಾಲ-ಕಾಲಕ್ಕೆ ಮಳೆಯಾಗುವುದು ಸೇರಿದಂತೆ ಮನುಷ್ಯನಿಗೆ ನೈಸರ್ಗಿಕವಾಗಿ ಸಂಪನ್ಮೂಲ ಸಿಗಲಿದೆ ಎಂದರು.
ಮನೆಯ ಮುಂದೆ, ಹೊಲ, ತೋಟಗಳಲ್ಲಿ ಗಿಡ-ಮರ ಬೆಳೆಸಬೇಕಾಗಿದೆ. ಜಾಗತೀಕರಣದಲ್ಲಿ ಪರಿಸರದ ಸಂರಕ್ಷಣೆ ದೊಡ್ಡ ಸವಾಲಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಧ್ಯೇಯವಾಗಬೇಕು ಎಂದು ತಿಳಿಸಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಸಿ ನೆಟ್ಟರು.
ಈ ವೇಳೆ ಶಿರಸ್ತೇದಾರ ಶರಣಪ್ಪ, ಪ್ರಕಾಶ, ಮಂಜುನಾಥ ಹಿರೇಮಠ, ಕಂದಾಯ ನೀರಿಕ್ಷಕ ರವೀಶ ಹಿರೇಮಠ, ನಿಲಾಂಬಿಕಾ, ಸಂಗಮೇಶ ಗುಂಡೂರಾವ್, ವಿಜಯ್, ಗುರುಲಿಂಗಯ್ಯ, ಅಮರೇಶ ತೆಗ್ಗಿನಮನಿ, ಅಮರೇಶ, ಮುತ್ತಣ್ಣ, ಗ್ರಾಮ ಆಡಳಿತಾಧಿಕಾರಿ ಶರಣಪ್ಪ ಚಳಿಗೇರಿ, ಯಂಕೋಬ, ಮೈಬೂಬ ಸೇರಿದಂತೆ ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿ ಇದ್ದರು.