ಪ್ರತಿಯೊಬ್ಬರು ಸಹೋದರತ್ವದಿಂದ ಬಾಳಿ

| Published : Jun 08 2025, 02:57 AM IST

ಸಾರಾಂಶ

ಬಕ್ರೀದ್‌ ಹಬ್ಬದಾಚರಣೆ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಿಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಯಲಬುರ್ಗಾ:

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು.

ಜಾಮಿಯಾ ಮಸೀದಿಯಿಂದ ಪಟ್ಟಣದ ಈದ್ಗಾ ಮೈದಾನದ ವರೆಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಧರ್ಮ ಗುರುಗಳು ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೊಂದಿಗೆ ಸಹೋದರತ್ವದಿಂದ ಬಾಳುವಂತೆ ಕರೆ ನೀಡಿದರು. ದಾನ-ಧರ್ಮದ ಮಹತ್ವ ಕುರಿತು ಬೋಧಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಹಂಚಿಕೊಂಡರು.

ತಾಲೂಕಿನ ಮುಧೋಳದಲ್ಲಿ ಮುಸ್ಲಿಮರು ಶನಿವಾರ ಹಜರತ್ ಸೈಯದ್ ಶಾವಲಿ ಕಮಿಟಿ ಹಾಗೂ ಮೆಹಬೂಬ್ ಸುಭಾನಿ ಕಮಿಟಿ ಮತ್ತು ಸುತ್ತಲಿನ ಗ್ರಾಮದ ಮುಸ್ಲಿಮರು ಹಜರತ್ ಸೈಯದ್ ಶಾವಲಿ ದರ್ಗಾದಿಂದ ಈದ್ಗಾ ಮೈದಾನದ ವರೆಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಧರ್ಮಗುರು ಅಬ್ದುಲ್ ಖಾದರ್ ಖಾಜಿ ಮಾತನಾಡಿ, ನಾಡಿನಲ್ಲಿ ಶಾಂತಿ, ಸೌಹಾರ್ದತೆ ಬೆಳಗಲಿ, ಎಲ್ಲರಿಗೂ ಅಲ್ಲಾಹನು ಸುಖ, ಸಂತೋಷ, ಸಮೃದ್ಧಿ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು. ಹಜರತ್ ಸಯ್ಯದ್ ಶಾವಲಿ ಅಂಜುಮನ್ ಕಮಿಟಿಯ ಹಜರತ್‌ರಾದ ಅಮೀರ್ ಬನ್ನೂರ ಮಾತನಾಡಿದರು.

ಈ ವೇಳೆ ಮುಖಂಡರಾದ ಸಯ್ಯದ್ ಚೇರಮನ್, ಮೌಲಾಸಾಬ್ ಮೊತೇಖಾನ್, ಎಚ್.ಎಚ್. ಹಿರೇಮನಿ, ಖಾದಿರ್‌ಬಾಷಾ ತೋಳಗಲ್, ಇಮಾಮ್‌ಹುಸೇನ್ ಹಿರೇಮನಿ, ಲಾಲ್‌ಸಾಬ್ ಆರಬಳ್ಳಿನ, ಕಬೀರ್‌ಸಾಬ್ ಗಡಾದ, ಹುಸೇನ್‌ಸಾಬ್ ಕಿನ್ನಾಳ, ಗುಡುಸಾಬ್ ರಾಟಿ, ಸಯ್ಯದ್ ಹಿರೇಮನಿ, ಬಾಷುಸಾಬ್ ಆರಬಳ್ಳಿನ ಇದ್ದರು.