ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)
ಎಸ್ಸಿಗಳಲ್ಲಿಯೇ ಸಾಕಷ್ಟು ಒಳಪಂಗಡಗಳಿರುವುದರಿಂದ ನಮ್ಮವರು ಮೀಸಲಾತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಕಾರಣ ನಮ್ಮ ಛಲವಾದಿ ಬಂಧುಗಳನ್ನು ಮುಂಚೂಣಿಗೆ ತರುವ ಉದ್ದೇಶದಿಂದ ಪ್ರತಿ ಹಳ್ಳಿಗಳಿಗೂ ಸಹ ನಮ್ಮ ಸಂಘಟನೆ ವಿಸ್ತರಿಸಬೇಕಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಗಸ್ತಿ ಹೇಳಿದರು.ಪಟ್ಟಣದ ಬುದ್ಧವಿಹಾರದಲ್ಲಿ ಛಲವಾದಿ ಮಹಾಸಭಾದ ನೂತನ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗಾಗಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಂಘಟಣೆಯು ಬುದ್ಧ, ಬಸವ ಹಾಗೂ ಅಂಬೇಡ್ಕರ್ ತತ್ವಗಳ ಮೇಲೆ ರಚನೆಗೊಂಡು ರಾಜ್ಯದಲ್ಲಿ ಛಲವಾದಿ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎತ್ತಿಹಿಡಿಯುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ. ಪ್ರಸ್ತುತ ರಾಜಕೀಯ ವಲಯದಲ್ಲಿ ಎಡಗೈ, ಬಲಗೈ ಎನ್ನುವ ಕೆಟ್ಟ ಆಲೋಚನೆಯಿಂದ ನಮ್ಮನ್ನು ಸಂವಿಧಾನದ ಹಕ್ಕಿನಿಂದ ದೂರ ಇಡುತ್ತಿದ್ದಾರೆ ಎಂದು ದೂರಿದರು.ತೇರದಾಳ ತಾಲೂಕು ಸಲಹಾ ಸಮಿತಿ ಅಧ್ಯಕ್ಷ ಪರಸಪ್ಪ ಮಾಸ್ತಿ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಮಾತನಾಡಿದರು.
ತೇರದಾಳ ನೂತನ ತಾಲೂಕು ಅಧ್ಯಕ್ಷರಾಗಿ ನ್ಯಾಯವಾದಿ ಬ್ರಹ್ಮಾನಂದ ರಘುನಾಥ ಗೋಟಡಕಿ, ಉಪಾಧ್ಯಕ್ಷರಾಗಿ ಬಸಪ್ಪ ಪಂಡಿತ ಯಲ್ಲೊಡಗಿ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಗುಂಡಪ್ಪ ಸರಿಕರ, ಖಜಾಂಚಿಯಾಗಿ ಗಣಪತಿ ಭಗವಂತ ಕಾಂಬಳೆ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ ಪಾ. ರೋಡಕರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಸಭೆಯಲ್ಲಿ ದಯಾನಂದ ಕಾಳೆ, ಸಿದ್ದು ದೊಡಮನಿ, ಹಣಮಂತ ಜಗದಮನಿ, ವಿಠ್ಠಲ ಶಿಂಗೆ, ಸದಾಶಿವ ಶಿಂಗೆ, ಮಂಜು ಸರಿಕರ, ಸಾಗರ ಸರಿಕರ, ಸುರೇಶ ಹಟ್ಟೆನ್ನವರ, ಲಕ್ಷಣ ಹಟ್ಟೆನ್ನವರ ಸೇರಿ ತೇರದಾಳ, ತಮದಡ್ಡಿ, ಹಳಿಂಗಳಿ ಹಾಗೂ ಹನಗಂಡಿ ಗ್ರಾಮದ ಮುಖಂಡರು ಇದ್ದರು.