ಬಾಗಲಕೋಟೆ ತಾಲೂಕಿನ ರಾಂಪುರದ ಚಿತ್ರಕಲಾವಿದ ಕೆಂಚಪ್ಪ ಬಡಿಗೇರ ಅವರು ಧಾನ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಚಿತ್ರ ಬಿಡಿಸಿ ಅಭಿಮಾನ ಮೆರದಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ತಾಲೂಕಿನ ರಾಂಪುರದ ಚಿತ್ರಕಲಾವಿದ ಕೆಂಚಪ್ಪ ಬಡಿಗೇರ ಅವರು ಧಾನ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಚಿತ್ರ ಬಿಡಿಸಿ ಅಭಿಮಾನ ಮೆರದಿದ್ದಾರೆ. ತನ್ನ ಫೇಸ್ ಬುಕ್‌ ಪೇಜ್‌ನಲ್ಲಿ ಈ ಚಿತ್ರ ರಚನಾ ದೃಶ್ಯ ಹಂಚಿಕೊಂಡ ಸಚಿವ ಪ್ರಹ್ಲಾದ್ ಜೋಷಿ ಅವರು, ಹೆಸರು, ತೊಗರಿ ಬೇಳೆ, ಮಡಿಕೆ ಕಾಳು, ಸಾಸಿವೆ ಕಾಳು ಬಳಸಿ ಕೇಂದ್ರ ಸಚಿವರ ಸುಂದರ ಭಾವಚಿತ್ರ ರಚನೆ ಮಾಡಿರುವ ಚಿತ್ರಕಲಾವಿದ ಕೆಂಚಪ್ಪ ಬಡಿಗೇರ ಅವರು ಅಭಿಮಾನ, ಪ್ರೀತಿಯಿಂದ ಸೃಜನಾತ್ಮಕವಾಗಿ ನನ್ನ ಭಾವಚಿತ್ರ ಬಿಡಿಸಿದ್ದಕ್ಕೆ ಅಭಿನಂದನೆಗಳು ಎಂದು ಸಚಿವರು ಬರೆದುಕೊಂಡಿದ್ದಾರೆ.

ಕೆಂಚಪ್ಪ ಬಡಿಗೇರ ಅವರು ಕಲಾಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕಲಾವಿದರಾಗಿದ್ದು, ಇವರ ಏಕವ್ಯಕ್ತಿ, ಗುಂಪು ಚಿತ್ರಕಲಾ ಪ್ರದರ್ಶನಗಳು, ಕಾರ್ಯಾಗಾರಗಳು, ಉತ್ಸವಗಳು, ಅನೇಕ ಸಭೆ ಸಮಾರಂಭಗಳಲ್ಲಿ ಪ್ರದರ್ಶನಗೊಂಡಿದ್ದು ಹೆಮ್ಮೆಯ ವಿಷಯವಾಗಿದೆ. ಚಿತ್ರ ಹಾಗೂ ಶಿಲ್ಪಕಲೆಗಳಲ್ಲಿ ಎರಡರಲ್ಲೂ ಪರಿಣತಿ ಹೊಂದಿದ ಅವರು, ಕಲ್ಲು, ಕಟ್ಟಿಗೆ, ಸಿಮೆಂಟ್, ಫೈಬರ್, ಲೋಹಗಳು ಹಾಗೂ ಇತ್ಯಾದಿ ಮಾಧ್ಯಮ ಬಳಸಿ ಕಲಾಕೃತಿಗಳನ್ನು ರಚಿಸುತ್ತಾರೆ.