ಬರಕ್ಕೆ ತತ್ತರಿಸಿದ್ದ ರೈತರೀಗ ಮುಂಗಾರು ಸಿದ್ಧತೆಯಲ್ಲಿ

| Published : May 31 2024, 02:35 AM IST / Updated: May 31 2024, 07:18 AM IST

ಸಾರಾಂಶ

ಮಳೆಯ ತೀವ್ರ ಕೊರತೆ ಮಧ್ಯೆ ಬಿರು ಬೇಸಿಗೆಗೆ ತತ್ತರಿಸಿದ್ದ ರೈತರು ಈಗ ಬೇಸಿಗೆಯ ಬವಣೆ ಮರೆತು ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿದ್ದಾರೆ. ಎರಡು ಮೂರು ಸಲ ಉತ್ತಮ ಮಳೆಯಾಗಿದ್ದು ರೈತರಲ್ಲಿ ಸಂತಸ ಮನೆ ಮಾಡಿದೆ.

ಬಿಂದುಮಾಧವ ಮಣ್ಣೂರ

ಅಫಜಲ್ಪುರ : ತಾಲೂಕಿನಲ್ಲಿ ಮಳೆಯ ತೀವ್ರ ಕೊರತೆ ಮಧ್ಯೆ ಬಿರು ಬೇಸಿಗೆಗೆ ತತ್ತರಿಸಿದ್ದ ರೈತರು ಈಗ ಬೇಸಿಗೆಯ ಬವಣೆ ಮರೆತು ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿದ್ದಾರೆ. ಎರಡು ಮೂರು ಸಲ ಉತ್ತಮ ಮಳೆಯಾಗಿದ್ದು ರೈತರಲ್ಲಿ ಸಂತಸ ಮನೆ ಮಾಡಿದೆ.

ಬರಗಾಲದಿಂದ ಕಂಗಾಲಾಗಿದ್ದ ರೈತರು ಹೊಲಕ್ಕೆ ಹೋಗಿರಲಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಜಮೀನುಗಳು ಹರಗಿ, ಹದಗೊಳಿಸಲು ಮುಂದಾಗುತ್ತಿದ್ದಾರೆ. ಜಮೀನುಗಳಲ್ಲಿ ಕುಂಟೆ ಹೊಡೆದು ಕಸಕಡ್ಡಿ ತೆಗೆಯುವುದು, ಸೆಗಣಿ ಗೊಬ್ಬರ ಚೆಲ್ಲುವುದು ಕಂಡುಬರುತ್ತಿದೆ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧರಾಗುತ್ತಿದ್ದಾರೆ. ಕಳೆದ ಎರಡ್ಮೂರು ತಿಂಗಳಿಂದ 45 ಡಿಗ್ರಿ ಇದ್ದ ತಾಪಮಾನ ವರುಣನ ಆಗಮನದಿಂದ ಸ್ವಲ್ಪ ಕಡಿಮೆಯಾಗಿದೆ. ಮಳೆಗಾಗಿ ಕಾಯುತ್ತಾ ಕುಳಿತಿದ್ದ ರೈತರಲ್ಲಿ ಆಶಾಭಾವನೆ ಮೂಡಿದ್ದು ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸಲು ಆರಂಭಿಸಿದ್ದಾರೆ.

ವಾಡಿಕೆಗಿಂತಲೂ ಹೆಚ್ಚು ಮಳೆ: ಜನೇವರಿ 1ರಿಂದ ಮೇ 26ರ ವರೆಗೆ 59.9 ಮಿಲಿ ಮೀಟರ್ ಮಳೆ ಆಗಬೇಕಾಗಿತ್ತು.ಆದರೆ 108 ಮಿಲಿ ಮೀಟರ್ ಮಳೆಯಾಗಿದೆ.ವಾಡಿಕೆಗಿಂತ 48.8 ಮಿಲಿ ಮೀಟರ್ ಜಾಸ್ತಿ ಮಳೆಯಾಗಿದೆ ಇದು ರೈತರಲ್ಲಿ ಉತ್ಸಾಹ ತುಂಬಿದೆ.ಮಳೆಯ ಉತ್ತಮ ಆರಂಭದಿಂದ ಭೂಮಿ ಹದಗೊಳಿಸಲು ಮುಂದಾಗಿರುವುದು ಕಂಡು ಬರುತ್ತಿದೆ.ಅಲ್ಪ ಮಳೆಗೂ ಬಿತ್ತನೆಗೆ ಅನುಕೂಲವಾಗುವ ಕೆಂಪು ಮಣ್ಣಿನ ಮಸಾರಿ ಜಮೀನುಗಳಿಗೆ ರೋಹಿಣಿ ಮಳೆ ಬಂದರೆ ಸಾಕು ಬಿತ್ತನೆ ಕಾರ್ಯ ಗರಿಗೆದರುತ್ತವೆ. ಆದರೆ ಕಪ್ಪು ಮಣ್ಣಿನ ಜಮೀನುಗಳಿಗೆ ಉತ್ತಮ ಮಳೆ ಸುರಿದರೆ ಮಾತ್ರ ಬಿತ್ತನೆ ನಡೆಯುತ್ತದೆ.

ಬೀಜ, ಗೊಬ್ಬರ ಸಂಗ್ರಹ: ಮುಂಗಾರು ಬಿತ್ತನೆಗೆ ಅಗತ್ಯವಿರುವ ಬೀಜ, ಗೊಬ್ಬರ ಸಂಗ್ರಹಣೆಗೆ ರೈತರು ಹಾಗೂ ಕೃಷಿ ಇಲಾಖೆ ಮುಂದಾಗುತ್ತಿದೆ. ರೈತರು ಅಗ್ರೋ ಸೆಂಟರ್‌ಗಳಲ್ಲಿ ಗೊಬ್ಬರ ಖರೀದಿ ಮಾಡುತ್ತಿದ್ದಾರೆ.

ಬಿತ್ತನೆ ಮಾಡುವಷ್ಟು ಮಳೆಯಾಗಿಲ್ಲ.ಆದರೂ ರೋಹಿಣಿ ಮಳೆ ಸುರಿಯುವ ಭರವಸೆ ಇದೆ. ಈ ಸಂದರ್ಭದಲ್ಲಿ ಕೃಷಿ ಇಲಾಖೆ ರೈತರ ಬಿತ್ತನೆಗೆ ಬೇಕಾದ ಬೀಜ ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ತಾಲೂಕಿನ ಜ.1ರಿಂದ ಮೇ 26ರ ವರೆಗೆ 59.9 ಮಿಲಿ ಮೀಟರ್ ಮಳೆ ಆಗಬೇಕಾಗಿತ್ತು.ಆದರೆ 108 ಮಿಲಿ ಮೀಟರ್ ಮಳೆಯಾಗಿದೆ.ವಾಡಿಕೆಗಿಂತ 48.8 ಮಿಲಿ ಮೀಟರ್ ಜಾಸ್ತಿ ಮಳೆಯಾಗಿದೆ.

ಮುಂಗಾರು ಹಂಗಾಮಿನಲ್ಲಿ ರೋಹಿಣಿ ಮಳೆಯೇ ಮುಖ್ಯ ಆಧಾರವಾಗಿದೆ. ಇದು ಸಮರ್ಪಕವಾಗಿ ಸುರಿದರೆ ಮುಂಗಾರಿನ ವಾಣಿಜ್ಯ ಬೆಳೆ ಹೆಸರು ಕಾಳು ಬಿತ್ತನೆಗೆ ಸಾಧ್ಯ. ಜೊತೆಗೆ ಫಸಲು ಉತ್ತಮವಾಗಿ ಬರುತ್ತದೆ. ಇದರ ಜೊತೆಗೆ ಬಿ.ಟಿ. ಹತ್ತಿ, ತೊಗರಿ ಹಾಗೂ ಕಡಲೆ ಬಿತ್ತನೆ ಮಾಡುತ್ತಾರೆ. ಮೇ 25ರಿಂದ ರೋಹಿಣಿ ಮಳೆ ಆರಂಭವಾಗಿದೆ. ರೋಹಿಣಿ ಮಳೆ ಚೆನ್ನಾಗಿ ಬಂದರೆ ರೈತರ ಖುಷಿಗೆ ಪಾರವೇ ಇಲ್ಲದಂತಾಗುತ್ತದೆ ಸದ್ಯ ಈಗ ತಾಲೂಕಿನ ರೈತರ ಚಿತ್ತ ರೋಹಿಣಿ ಮಳೆಯತ್ತ ಎನ್ನುವಂತಾಗಿದೆ.ಬಿತ್ತನೆ ಮಾಡುವಷ್ಟು ಮಳೆಯಾಗಿಲ್ಲ.ಆದರೂ ರೋಹಿಣಿ ಮಳೆ ಸುರಿಯುವ ಭರವಸೆ ಇದೆ. ಈ ಸಂದರ್ಭದಲ್ಲಿ ಕೃಷಿ ಇಲಾಖೆ ರೈತರ ಬಿತ್ತನೆಗೆ ಬೇಕಾದ ಬೀಜ ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ತಾಲೂಕಿನ ರೈತರ ಆಗ್ರಹವಾಗಿದೆ . ಹೆಸರು ಉದ್ದು ಬಿತ್ತನೆ ಮಾಡಲು ಮಳೆಗಾಗಿ ಕಾದು ಕುಳಿತಿದ್ದೇವೆ. ಉತ್ತಮ ಮಳೆಯಾಗಿದ್ದು ಜಮೀನು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ.

- ಭೀಮಣ್ಣ ಹಡಲಗಿ, ಮಲ್ಲಪ್ಪ ಬಿಜಾಪುರ, ಮಣ್ಣೂರ ಗ್ರಾಮದ ರೈತರು