ವನಮಹೋತ್ಸವ ಕಾರ್ಯಕ್ರಮ

| Published : Sep 12 2025, 12:07 AM IST

ಸಾರಾಂಶ

ಹಾರೋಹಳ್ಳಿ ದೇವಸ್ಥಾನದ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಸ್ಥಳೀಯ ಲಯನ್ಸ್ ಕ್ಲಬ್ ಆಫ್ ಕಾವೇರಿ ಸಂಭ್ರಮ ವತಿಯಿಂದ ಸಮೀಪದ ಹಾರೋಹಳ್ಳಿ ದೇವಸ್ಥಾನದ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸಂಭ್ರಮದ ಅಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಜಿ ಬಿ.ಕೆ.ಚಿಣ್ಣಪ್ಪ, ನಿಕಟಪೂರ್ವ ಅಧ್ಯಕ್ಷ ಆರ್.ವಿ.ಧರ್ಮಪ್ಪ, ಪರಮೇಶ್, ಸದಸ್ಯರಾದ ಶಂಕರ್, ಶಿವಕುಮಾರ್, ಚಂದ್ರಶೇಖರ್, ಸಂದೀಪ್, ಸುಹಾನ್ ಮುಂತಾದವರು ಹಾಜರಿದ್ದರು.

----------------------------------

ಮುಹಮ್ಮದ್ ಪೈಗಂಬರ್ ಜನ್ಮದಿನ: ಸಂದೇಶ ಘೋಷಯಾತ್ರೆ

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಪ್ರವಾದಿ ಮುಹಮ್ಮದ್ ಪೈಗಂಬರ್ ರವರ 1500ನೇ ಜನ್ಮದಿನದ ಅಂಗವಾಗಿ ಶನಿವಾರ ಸುಂಟಿಕೊಪ್ಪದ ಪ್ರಮುಖ ಬೀದಿಗಳಲ್ಲಿ ಸಂದೇಶ ಘೋಷಯಾತ್ರೆ ನಡೆಸಲಾಯಿತು.

ಈ ಆಚರಣೆಯ ಸಂದರ್ಭ ಘೋಷಯಾತ್ರೆಯಲ್ಲಿ ಸಮುದಾಯದ ವಿವಿಧ ಯುವಕರು ಸಿಹಿ ತಂಪುಪಾನಿಯ ನೀಡಿದರು. ಮಕ್ಕಳು ಹಿರಿಯರು ಸಿಹಿ ತಿಂಡಿ ಮತ್ತು ತಂಪುಪಾನಿಯ ಬಾಟಲಿಗಳು ಘೋಷಯಾತ್ರೆಯ ತೆರಳಿ ಬೀದಿಗಳಲ್ಲಿ ಕಸವನ್ನು ಮೆರವಣಿಗೆಯ ಕೊನೆಯಲ್ಲಿ ಉಮ್ಮತ್ ಒನ್ ನೇತೃತ್ವದಲ್ಲಿ ಯುವಕರು ನಗರದ ಪ್ರಮುಖ ಬೀದಿಗಳಲ್ಲಿ ಪ್ಲಾಸ್ಟಿಕ್ ಕಾಗದ ಬಾಟಲ್‌ಗಳನ್ನು ಶುಚಿ ಗೊಳಿಸಲಾಯಿತು. ಇತರರಿಗೆ ಮಾದರಿಯಾಗುವಂತೆ ಪ್ರವಾದಿ ಸಂದೇಶ ಸಾರುವ ಹಬ್ಬ ಸ್ವಚ್ಛತೆಗೆ ಆದ್ಯತೆ ನೀಡುವ ಪ್ರೇರಣೆಯಾದರು.

ಈ ಸಂದರ್ಭ ಉಮ್ಮತ್ ಒನ್ ಪ್ರಮುಖರಾದ ಹನೀಫ ಕೆ. ಎಂ., ಉದ್ಯಮಿ ಸಮಾಜ ಸೇವಕ ಶರೀಫ್ ಆರ್ ಎಚ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಲಿಕುಟಿ, ಜಿನಾಶುದ್ದೀನ್, ರಫೀಕ್ ಖಾನ್, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಕೀಮ್, ಸಮಾಜ ಸೇವಕರಾದ ಶಂಶು ಸಿದ್ದಿಕ್ ಅಬ್ದುಲ್ ರಹ್ಮಾನ್ ಅಮೀನ್ ಇಬ್ರಾಹಿಂ ರಮ್ಮಿ ಷರೀಫ್ ನಾಸಿರ್ ಅಫ್ರಿದ್ ಗದ್ದೆಹಳ್ಳ ಇಚ್ಚ ಅಬ್ಬಾಸ್ ಅಕೀಂ ಸತರ್ ಮುಂತಾದವರು ಸ್ವಚ್ಛತ ಕಾರ್ಯದಲ್ಲಿ ಪಾಲ್ಗೊಂಡಿದ್ದರು.