ಬಂಟಕಲ್ಲು ಶಾಲೆಗೆ ಹಳೆವಿದ್ಯಾರ್ಥಿಯಿಂದ ಉಚಿತ ಪುಸ್ತಕ - ಲೇಖನ ಪರಿಕರಗಳ ಕೊಡುಗೆ

| Published : Jun 08 2025, 01:40 AM IST / Updated: Jun 08 2025, 01:41 AM IST

ಬಂಟಕಲ್ಲು ಶಾಲೆಗೆ ಹಳೆವಿದ್ಯಾರ್ಥಿಯಿಂದ ಉಚಿತ ಪುಸ್ತಕ - ಲೇಖನ ಪರಿಕರಗಳ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಶತಮಾನೋತ್ಸವದ ಹೊಸ್ತಿಲಲ್ಲಿರುವ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಳೆದ ೧೮ ವರ್ಷಗಳಿಂದ ಶಾಲಾ ಹಳೆ ವಿದ್ಯಾರ್ಥಿ, ಅನಿವಾಸಿ ಭಾರತೀಯ ಪೊದಮಲೆ ಉಮೇಶ್ ಪಾಟ್ಕರ್ ಅವರು ಉಚಿತ ಪುಸ್ತಕ ಹಾಗೂ ಲೇಖನ ಪರಿಕರಗಳನ್ನು ನೀಡುತ್ತಿದ್ದು, ಗುರುವಾರ ಉಮೇಶ ಪಾಟ್ಕರ್‌ ಅವರ ಹೆತ್ತವರಾದ ಸುಂದರ ಪಾಟ್ಕರ್ ದಂಪತಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಕಾಪು

ಶತಮಾನೋತ್ಸವದ ಹೊಸ್ತಿಲಲ್ಲಿರುವ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಳೆದ ೧೮ ವರ್ಷಗಳಿಂದ ಶಾಲಾ ಹಳೆ ವಿದ್ಯಾರ್ಥಿ, ಅನಿವಾಸಿ ಭಾರತೀಯ ಪೊದಮಲೆ ಉಮೇಶ್ ಪಾಟ್ಕರ್ ಅವರು ಉಚಿತ ಪುಸ್ತಕ ಹಾಗೂ ಲೇಖನ ಪರಿಕರಗಳನ್ನು ನೀಡುತ್ತಿದ್ದು, ಗುರುವಾರ ಉಮೇಶ ಪಾಟ್ಕರ್‌ ಅವರ ಹೆತ್ತವರಾದ ಸುಂದರ ಪಾಟ್ಕರ್ ದಂಪತಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭ ಸುಂದರ ಪಾಟ್ಕರ್ ದಂಪತಿಯನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ರಾಮದಾಸ್ ಪ್ರಭು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶಶಿಧರ ವಾಗ್ಲೆ, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಉದ್ಯಮಿ ಮಾಧವ ಕಾಮತ್, ಸಮಿತಿಯ ಕಾರ್ಯದರ್ಶಿ ಹಾಗೂ ಸ್ಥಳೀಯ ಗ್ರಾ.ಪಂ. ವಾರ್ಡ್ ಸದಸ್ಯ ಕೆ.ಆರ್.ಪಾಟ್ಕರ್, ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಪಾಟ್ಕರ್, ರಕ್ಷಕರ ಸಂಘ ಅಧ್ಯಕ್ಷ ನವೀನ್, ರಮೇಶ್‌ಚಂದ್ರ ನಾಯಕ್, ವನಿತಾ ನಾಯಕ್, ವಿಶ್ವನಾಥ್ ಬಾಂದೇಲ್ಕರ್, ಮನೋಜ್ ನಾಯಕ್ ಪುನಾರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್ ಸ್ವಾಗತಿಸಿದರು. ಶಿಕ್ಷಕಿ ವನಿತಾ ನಿರೂಪಿಸಿದರು. ಶಿಕ್ಷಕಿಯರಾದ ಶ್ವೇತಾ, ರೇಶ್ಮಾ ಸಹಕರಿಸಿದರು. ಸುಮತಿ ಟೀಚರ್ ವಂದಿಸಿದರು.