ಸಾರಾಂಶ
- ಜಿಲ್ಲೆಯಲ್ಲಿ ಸಂಘ ಉತ್ತಮವಾಗಿದ್ದು, ಇನ್ನಷ್ಟು ಬಲಗೊಳ್ಳಲು ಸಲಹೆ
- - - ಹೊನ್ನಾಳಿ: ಜಿಲ್ಲಾ ಕನಕ ನೌಕರರ ಸಂಘದ ಅಭಿವೃದ್ಧಿ ಹಾಗೂ ಸಂಘಟನೆಗಾಗಿ ತಾವು ಸದಾ ಸಹಕಾರ ಹಾಗೂ ಸಹಾಯಹಸ್ತ ಚಾಚುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಭರವಸೆ ನೀಡಿದರು.ಭಾನುವಾರ ತಮ್ಮ ಗೃಹ ಕಚೇರಿಗೆ ಭೇಟಿ ನೀಡಿದ ಕನಕ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದಪ್ಪ ದಳವಾಯಿ ಹಾಗೂ ಪದಾಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕನಕ ನೌಕರರ ಸಂಘ ಉತ್ತಮ ಸೇವೆ ಸಲ್ಲಿಸುತ್ತಿದೆ. ಆದರೂ ಸಂಘವು ಇನ್ನಷ್ಟು ಸಂಘಟನೆಯಾಗಬೇಕು ಮತ್ತು ಬಲಗೊಳ್ಳಬೇಕು ಎಂದರು.
ಈ ನಿಟ್ಟಿನಲ್ಲಿ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಅಗತ್ಯ ಬಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಹಕಾರವನ್ನು ಸಂಘಕ್ಕೆ ಕಲ್ಪಿಸುವ ಭರವಸೆ ನೀಡಿದರು.ಈ ಸಂದರ್ಭ ಜಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷ ಶಿವಾನಂದಪ್ಪ ದಳವಾಯಿ, ಪ್ರಧಾನ ಕಾರ್ಯದರ್ಶಿ ಡಿ.ಎನ್. ಗಣೇಶ್, ಖಜಾಂಚಿ ಜೆ.ಆರ್. ಶಿವಲಿಂಗಪ್ಪ, ಗೌರವ ಅಧ್ಯಕ್ಷ ಡಿ.ಡಿ. ಹಾಲಪ್ಪ, ಉಪಾಧ್ಯಕ್ಷ ಪದ್ಮಪ್ಪ, ಹೊನ್ನಾಳಿ ಸಂಘದ ನಿರ್ದೇಶಕ ತಿಪ್ಪೇಸ್ವಾಮಿ, ಎಂ.ಎನ್. ಪರಮೇಶ್ವರಪ್ಪ, ನಾಗರಾಜಪ್ಪ, ರೇವಣಪ್ಪ, ನ್ಯಾಮತಿ ತಾಲೂಕು ಸಂಘದ ಅಧ್ಯಕ್ಷ ನಿಂಗಪ್ಪ ಸೇರಿದಂತೆ ಕನಕ ನೌಕರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
- - - -3ಎಚ್.ಎಲ್.ಐ2.ಜೆಪಿಜಿ:ಹೊನ್ನಾಳಿಗೆ ಭೇಟಿ ನೀಡಿದ ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷ ಶಿವಾನಂದಪ್ಪ ದಳವಾಯಿ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು ಎಚ್.ಬಿ. ಮಂಜಪ್ಪ ಅವರನ್ನು ಸನ್ಮಾನಿಸಿದರು.