ಎಲೆಗಳಲ್ಲಿ ಅರಳಿದ ಗಣೇಶ ಕಲಾಕೃತಿ

| Published : Sep 07 2024, 01:39 AM IST

ಸಾರಾಂಶ

ಮುದ್ದೇಬಿಹಾಳ: ತಾಲ್ಲೂಕಿನ ಯರಗಲ್ಲ ಗ್ರಾಮದ ಚಿತ್ರಕಲಾವಿದ ಬಸವರಾಜ ಹಣಮಪ್ಪ ಹಡಪದ ಅವರು ಗಣೇಶೋತ್ಸವದ ಅಂಗವಾಗಿ ಪ್ರತಿವರ್ಷ ಒಂದೊಂದು ರೀತಿಯಲ್ಲಿ ಭಿನ್ನ ವಿಭಿನ್ನವಾಗಿ ಗಣೇಶನ ಕಲಾಕೃತಿಗಳನ್ನು ಚಿತ್ರಿಸುತ್ತಿದ್ದು, ಎಲೆಗಳಲ್ಲಿ ಗಣೇಶ ಚಿತ್ರಗಳನ್ನು ಚಿತ್ರಿಸಿದ್ದಾರೆ. ಕಳೇದ ವರ್ಷ ಪೋಸ್ಟ್ ಕಾರ್ದ್‌ ಮೇಲೆ ವಿವಿಧ ರೀತಿಯ ಗಣೇಶನ ಕಲಾಕೃತಿಗಳನ್ನು ರಚಿಸಲಾಗಿತ್ತು.

ಮುದ್ದೇಬಿಹಾಳ: ತಾಲ್ಲೂಕಿನ ಯರಗಲ್ಲ ಗ್ರಾಮದ ಚಿತ್ರಕಲಾವಿದ ಬಸವರಾಜ ಹಣಮಪ್ಪ ಹಡಪದ ಅವರು ಗಣೇಶೋತ್ಸವದ ಅಂಗವಾಗಿ ಪ್ರತಿವರ್ಷ ಒಂದೊಂದು ರೀತಿಯಲ್ಲಿ ಭಿನ್ನ ವಿಭಿನ್ನವಾಗಿ ಗಣೇಶನ ಕಲಾಕೃತಿಗಳನ್ನು ಚಿತ್ರಿಸುತ್ತಿದ್ದು, ಎಲೆಗಳಲ್ಲಿ ಗಣೇಶ ಚಿತ್ರಗಳನ್ನು ಚಿತ್ರಿಸಿದ್ದಾರೆ. ಕಳೇದ ವರ್ಷ ಪೋಸ್ಟ್ ಕಾರ್ದ್‌ ಮೇಲೆ ವಿವಿಧ ರೀತಿಯ ಗಣೇಶನ ಕಲಾಕೃತಿಗಳನ್ನು ರಚಿಸಲಾಗಿತ್ತು. ಈ ವರ್ಷ ಪ್ರಕೃತಿಯಲ್ಲಿ ದೊರೆಯುವ ಎಲೆಗಳ ಮೇಲೆ ವಿಶೇಷವಾಗಿರುವ ಗಣೇಶನ ರೂಪಕಗಳನ್ನು ರಚಿಸಿ ಗಮನ ಸೆಳೆದಿದ್ದಾರೆ. ಹೀಗೆ ಬೇಡದ ವಸ್ತುವನ್ನು ತೆಗೆದುಕೊಂಡು ವಿಶೇಷವಾದ ಕಲಾಕೃತಿಗಳನ್ನು ರಚಿಸುವುದು ಇವರ ಹವ್ಯಾಸವಾಗಿದ್ದು, ಈ ಕಲಾಕೃತಿಗಳ ವಿಶೇಷ ಏನೆಂದರೆ ನಾವು ಕಲಾಕೃತಿಗಳನ್ನು ರಚಿಸಬೇಕಾದರೆ ಕಾರ್ಡ್‌ಸೀಟ, ಕಲರ್, ಬ್ರೆಷ್, ಅಳತೆ ಮಾಪನ, ಕ್ಯಾನ್ವಾಸ್ಹೀ ಗೆ ವಿವಿಧ ರೀತಿಯ ವಸ್ತುಗಳನ್ನು ಬಳಸದೇ ಕಲಾಕೃತಿಗಳನ್ನು ರಚಿಸಬಹುದು.

ಇನ್ನೂ ಬೇಡವಾದ ವಸ್ತುಗಳನ್ನು ತೆಗೆದುಕೊಂಡು ಕಲಾಕೃತಿಗಳನ್ನು ರಚಿದುವುದೇ ವಿಶೇಷ ಇಂತಹ ವಸ್ತುಗಳನ್ನು ಉಪಯೋಗಿಸಿ ಕಲಾಕೃತಿಗಳನ್ನು ರಚಿಸುವುದು ಇವರ ವಿಶೇಷತೆ.