ಸಾರಾಂಶ
Gold medal for Prithvi Swamy
ಬೀದರ್: ಗುರುನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಪೃಥ್ವಿ ವೈಜನಾಥ್ ಸ್ವಾಮಿ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ 42ನೇ ಘಟಿಕೋತ್ಸವದ ಪ್ರಯುಕ್ತ ವಾಣಿಜ್ಯ ವಿಭಾಗದಿಂದ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಪೃಥ್ವಿ ಸ್ವಾಮಿ ಚಿನ್ನದ ಪದಕ ಪಡೆದಿದಕ್ಕೆ ನಾನಕ್ ಝೀರಾ ಸಾಹೇಬ್ ಫೌಂಡೇಶನ್ ಅಧ್ಯಕ್ಷ ಸರ್ದಾರ್ ಬಲ್ಬೀರ್ ಸಿಂಗ್, ಗುರುನಾನಕ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರೇಷ್ಮಾ ಕೌರ್, ಕಾಲೇಜಿನ ಪ್ರಾಂಶುಪಾಲ ಡಾ.ಶಾಮಲಾ ವಿ ದತ್ತ. ವಿಭಾಗದ ಮುಖ್ಯಸ್ಥರು, ಉಪನ್ಯಾಸಕ ವರ್ಗ, ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದಕ್ಕೆ ಶ್ಲಾಘಿಸಿದ್ದಾರೆ.
--ಚಿತ್ರ 14ಬಿಡಿಆರ್55ಪೃಥ್ವಿ ಸ್ವಾಮಿ--