ಮಹಾನ್‌ ಪುರುಷರು ಒಂದೇ ಸಮಾಜಕ್ಕೆ ಸೀಮಿತರಾದವರಲ್ಲ: ತಮ್ಮಯ್ಯ

| Published : Oct 14 2023, 01:00 AM IST

ಸಾರಾಂಶ

ಮಹಾನ್‌ ಪುರುಷರು ಒಂದೇ ಸಮಾಜಕ್ಕೆ ಸೀಮಿತರಾದವರಲ್ಲ: ತಮ್ಮಯ್ಯ
- ಗುರು ಬಸವಾದಿ ಶರಣ ಹೂವಾಡಿಗ ಮಾದಯ್ಯ ನವರ ಜಯಂತಿ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಹೂಗಾರ, ಹೂವಾಡಿಗ ಸಮಾಜ ಇಂದು ಹತ್ತಾರು ಒಳ ಪಂಗಡಗಳನ್ನು ಹೊಂದಿದೆ. ಮಾದಯ್ಯನಂತಹ ಈ ಮಹಾನ್ ಪುರುಷರು, ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ಇವರೆಲ್ಲರೂ ಒಂದು ಧರ್ಮಕ್ಕೆ ಸೇರಿದವರಲ್ಲ, ಸಮಾಜದ ಶೋಷಿತ ವರ್ಗದ ಸಮಾನತೆಗೆ ಧ್ವನಿ ಎತ್ತಿ ಹೋರಾಟ ಮಾಡಿದ ಫಲವಾಗಿ, ಇಂದು ಸಹ ಅವರ ಹೆಸರು ಶಾಶ್ವತವಾಗಿದೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು. ನಗರದ ಕುವೆಂಪು ಕಲಾ ಮಂದಿರದಲ್ಲಿ ರಾಜ್ಯ ಹೂವಾಡಿಗರ ಮಹಾಸಭಾ ಹಾಗೂ ಜಿಲ್ಲಾ ಹೂವಾಡಿಗ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀ ಗುರು ಬಸವಾದಿ ಶರಣ ಹೂವಾಡಿಗ ಮಾದಯ್ಯ ನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಸವಣ್ಣ ನವರ ಪೂಜೆಗೆ ಪತ್ರೆ, ಹೂ ತರುವಕಾಯಕವನ್ನು ಶರಣ ಮಾದಯ್ಯನವರು ಮಾಡುತ್ತಿದ್ದರು, ಕಾಯಕವೇ ಕೈಲಾಸವೆಂಬಂತೆ ಮಾದಯ್ಯ ಮಾದಿಗರ ಹರಳಯ್ಯ, ಒಕ್ಕಲಿಗರ ಮುದ್ದಣ್ಣ, ಅಂಬಿಗರ ಚೌಡಯ್ಯ, ಇವರೆಲ್ಲರೂ ಅನುಭವ ಮಂಟಪದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು. 12ನೇ ಶತಮಾನದ ಬಸವಾದಿ ಶಿವ ಶರಣರಲ್ಲಿ ಒಬ್ಬರಾಗಿದ್ದ ಹೂಗಾರ ಮಾದಯ್ಯ ಬಸವಕಲ್ಯಾಣದಲ್ಲಿ, ಸಾಮಾಜಿಕ ಹರಿಕಾರರು, ಶೋಷಿತ ವರ್ಗದವರ ಸಮಾನತೆಗೆ ಹೋರಾಟ ಮಾಡಿ, ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಇವರ ಸಾಲಿನಲ್ಲಿ ಹೂಗಾರ ಮಾದಯ್ಯನವರು ಸೇರಿದ್ದಾರೆ ಎಂದರು. ಸಾಂಸ್ಕೃತಿಕವಾಗಿ ಭಾರತ ದೇಶ ವೈವಿಧ್ಯತೆ ಹೊಂದಿದೆ. ವಿವಿಧ ಸಮಾಜಗಳನ್ನು ಹೊಂದಿದೆ. 12ನೇ ಶತಮಾನದ ಅನುಭವ ಮಂಟಪದ ಒಬ್ಬ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದರು. ಹೂಗಾರ, ಹೂವಾಡಿಗರ ಉಪ ಪಂಗಡಗಳು ಒಟ್ಟಾಗಿ ಸೇರಿ ಮಾದಯ್ಯ ಜಯಂತಿ ಮಾಡುತ್ತಿರುವುದು ಸಂತಸ ತಂದಿದೆ. ಜೊತೆಗೆ ಇದೇ ರೀತಿ ಸಂಘಟಿತರಾಗಿ ಹೋರಾಟ ಮಾಡಿದಾಗ ಸಮಾಜದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತದೆ ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯಿತ್ರಿ ಶಾಂತೇಗೌಡ ಮಾತನಾಡಿ, ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಮುಂದೆ ಬಂದರೆ, ಸಮಾಜದ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ಪ್ರತಿ ಯೊಬ್ಬರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಕರೆ ನೀಡಿದರು. ಯಾವುದೇ ಪೂಜೆಗೆ ಹೂವಿನ ಅವಶ್ಯಕತೆ ಇದೆ, ಸುಂದರವಾಗಿ ಹೂ ಕಟ್ಟಿ ದೇವರಿಗೆ ಅರ್ಪಿಸುವ ನಿಮ್ಮ ಕಾಯಕ ತುಂಬಾ ಅರ್ಥಪೂರ್ಣವಾಗುವ ಜೊತೆಗೆ, ಆ ಹೂ ಜನ್ಮ ಸಾರ್ಥಕವಾಯಿತು ಎಂದು ಹೇಳುತ್ತದೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನದಿಸಿನ್ನೂರ ಶರಣ ಹೂಗಾರ ಮಾದಯ್ಯ ನವರ ಮಹಾ ಶಕ್ತಿ ಪೀಠದ ಶ್ರೀ ಗುರು ರಾಜೇಂದ್ರ ಶಿವ ಯೋಗಿಗಳು ಮಾತನಾಡಿ, ಹೂವಾಡಿಗರ ಸಮಾಜಕ್ಕೆ ಇದುವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಿಲ್ಲ, ಆದ್ದರಿಂದ ಸಮಾಜದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಮನವಿ ನೀಡಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಅಧ್ಯಕ್ಷರ ನೇಮಕ ಮಾಡುವಂತೆ ಕೋರಿದರು. ಹೂವಾಡಿಗರ ಸಮಾಜದ ಬಂಧುಗಳಿಗೆ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಮಳಿಗೆಗಳನ್ನು ಮೀಸಲಿಟ್ಟು, ಹೂವಿನ ವ್ಯಾಪಾರಕ್ಕೆ ಅನುಕೂಲ ಮಾಡುವಂತೆ ಒತ್ತಾಯಿಸಿದ ಅವರು, ಮುಂದಿನ ದಿನ ಗಳಲ್ಲಿ ಸರ್ಕಾರದಿಂದಲೇ ಹೂಗಾರ, ಮಾದಯ್ಯನ ಜಯಂತಿ ಆಚರಿಸುವಂತೆ ಆದೇಶಿಸಬೇಕೆಂದು ಆಗ್ರಹಿಸಿದರು. , ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷ ರಘು ವಹಿಸಿದ್ದರು,ನಿವೃತ್ತ ಶಿಕ್ಷಕ ಶೇಖರಪ್ಪ, ಹೂವಾಡಿಗರ ಸಂಘದ ಉಪಾಧ್ಯಕ್ಷ ಶಂಭುಲಿಂಗಪ್ಪ, ಜಿಲ್ಲಾಧ್ಯಕ್ಷ ಆನಂದ್, ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಬಸವರಾಜ್ ಹೂಗಾರ್, ಅಶೋಕ್‌, ರಾಜಣ್ಣ, ಕಲ್ಮುರಡಪ್ಪ, ರವಿಕುಮಾರ್, ಗೌರೀಶ್, ಚಂದ್ರಪ್ಪ, ಕಾರ್ಯದರ್ಶಿ ವಿನಯ್ ಉಪಸ್ಥಿತರಿದ್ದರು. 13 ಕೆಸಿಕೆಎಂ 1 ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಶುಕ್ರವಾರ ಶ್ರೀ ಗುರು ಬಸವಾದಿ ಶರಣ ಹೂವಾಡಿಗ ಮಾದಯ್ಯ ನವರ ಜಯಂತಿ ಕಾರ್ಯಕ್ರಮ ನಡೆಯಿತು. ಶಾಸಕ ಎಚ್‌.ಡಿ. ತಮ್ಮಯ್ಯ, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಹಾಗೂ ಸಮಾಜದ ಮುಖಂಡರು ಇದ್ದರು.