ರಾಷ್ಟ್ರೀಯ ತಂಡದಲ್ಲಿ ಶಿಂಡನಪುರ ಸಂಧ್ಯಾರಿಗೆ ಸ್ಥಾನ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಭಾರತ ತಂಡದ ಪರ ಫ್ರಿಸ್ಬೀ ಕ್ರೀಡೆಯಲ್ಲಿ ಮಲೇಷ್ಯಾದಲ್ಲಿ ಆಡಲಿರುವ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಗ್ರಾಮದ ವಿದ್ಯಾರ್ಥಿನಿ ಸಂಧ್ಯಾ ಅವರಿಗೆ ಶಾಸಕ ಎಚ್‌.ಎಂ. ಗಣೇಶ್‌ ಪ್ರಸಾದ್‌ ಅವರು ಸನ್ಮಾನಿಸಿ, ಆರ್ಥಿಕ ನೆರವು ನೀಡಿದರು.

ಮೈಸೂರು ನಗರದ ದೇವಗೀತಾ ನಿವಾಸಿ ಚಾಮಪ್ಪ ಮತ್ತು ನಂಜಮಣಿ ಶಿಂಡನಾಪುರ ಅವರ ಪುತ್ರಿ ಸಂಧ್ಯಾ ಸಂಧ್ಯಾ, ಪ್ರಸ್ತುತ ಬೆಂಗಳೂರಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಜು.4-5ರಂದು ಮಲೇಷ್ಯಾದಲ್ಲಿ ನಡೆಯಲಿರುವ ಫ್ರಿಸ್ಬೀ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ವಿದ್ಯಾರ್ಥಿನಿಯ ಸಾಧನೆಯನ್ನು ಶಾಸಕರು ಗುರುತಿಸಿ, ಆಕೆಗೆ ಸನ್ಮಾನಿಸಿ, ಆರ್ಥಿಕ ಸಹಾಯ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಜು.1ರಂದು ಸಂಧ್ಯಾ ಬೆಂಗಳೂರಿನಿಂದ ಮಲೇಷ್ಯಾಗೆ ತಂಡದೊಂದಿಗೆ ಪ್ರಯಾಣಿಸಲಿದ್ದು, ಶಾಸಕರು ಮಹದೇವಪ್ರಸಾದ್‌ ಫೌಂಡೇಷನ್‌ನಿಂದ ನೆರವು ನೀಡಿದ್ದಾರೆ.