ನಾಳೆ ಜನಪ್ರತಿನಿಧಿಗಳಿಗೆ ಸನ್ಮಾನ: ಡಾ.ಪ್ರಕಾಶ

| Published : Aug 03 2024, 12:31 AM IST

ಸಾರಾಂಶ

ಎಂಎಲ್ಸಿ ಮಾರುತಿರಾವ್‌ ಜಿ.ಮೂಳೆ, ನೂತನ ಬೀದರ್‌ ಲೋಕಸಭಾ ಸದಸ್ಯ ಸಾಗರ ಈಶ್ವರ ಖಂಡ್ರೆ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌ಗೆ ಸನ್ಮಾನ ನಡೆಯಲಿದೆ

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಪ್ರಕಾಶ ವಿದ್ಯಾಲಯ ಶಿಕ್ಷಣ ಸಂಸ್ಥೆ 72ನೇ ಸ್ಥಾಪನಾ ದಿವಸ ಪ್ರಯುಕ್ತ ಆ.4ರಂದು ಬೆಳಗ್ಗೆ 10ಕ್ಕೆ ಲೋಕಸಭಾ ಸದಸ್ಯ, ಶಾಸಕ ಹಾಗೂ ವಿಧಾನ ಪರಿಷತ್‌ ಸದಸ್ಯರಿಗೆ ಸನ್ಮಾನ ಸಮಾರಂಭ, ಪುಸ್ತಕ ಪ್ರಕಾಶನ, ಮರಾಠಿ ಸಾಹಿತ್ಯ ಸಮ್ಮೇಳನ ಮತ್ತು ಗಣಕಯಂತ್ರ ಕೋಣೆ ಉದ್ಘಾಟನೆ ಸಮಾರಂಭವನ್ನು ಪ್ರಕಾಶ ವಿದ್ಯಾಲಯ ಪ್ರೌಢ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಹಾಗೂ ಸಂಸ್ಥೆಯ ಕಾರ್ಯದರ್ಶಿ ಡಾ. ಪ್ರಕಾಶ ಪಾಟೀಲ್‌ ಮಾಹಿತಿ ನೀಡಿದರು.

ತಾಲೂಕಿನ ಘಾಟಬೋರಾಳ ಗ್ರಾಮದ ಪ್ರಕಾಶ ವಿದ್ಯಾಲಯ ಸಭಾ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕಾಶ ವಿದ್ಯಾಲಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಎಂಎಲ್ಸಿ ಮಾರುತಿರಾವ್‌ ಜಿ.ಮೂಳೆ, ನೂತನ ಬೀದರ್‌ ಲೋಕಸಭಾ ಸದಸ್ಯ ಸಾಗರ ಈಶ್ವರ ಖಂಡ್ರೆ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌ಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.

ಡಾ.ಇಂದ್ರಜೀತ್‌ ಭಾಲೆರಾವ್‌ ಜೇಷ್ಠ ಕವಿ, ಕಾದಂಬರಿಕಾರರ ಹಸ್ತದಿಂದ ಪುಸ್ತಕ ಬಿಡುಗಡೆ ಸಮಾರಂಭ. ರಮೇಶ ಮಂದಕನಳ್ಳಿ ಸಹೋದರಿಯರಿಂದ ಗಣಕ ಯಂತ್ರಗಳ ಕಾಣಿಕೆ, ಪ್ರಕಾಶ ವಿದ್ಯಾಲಯ ಶಿಕ್ಷಣ ಸಂಸ್ಥೆ 72ನೇ ವಾರ್ಷಿಕೋತ್ಸವದ ನಿಮಿತ್ತ ಗಂಭೀರಾನಂದ ಸೋಮವಂಶಿ ಅವರು ಬರೆದ ಪ್ರಕಾಶ ವಿದ್ಯಾಲಯದ ಯಶೋಗಾಥೆ ಪುಸ್ತಕದ ಮತ್ತು ಇತರೆ 6 ಪುಸ್ತಕಗಳ ಬಿಡುಗಡೆ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ವಿದ್ಯೆ ಕಲಿತು ರಾಜ್ಯ ಹಾಗೂ ವಿದೇಶಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಸೇರಿ ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ್‌, ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಪ್ರಭು ಘಂಟೆ, ಪಿಕೆಪಿಎಸ್‌ ಅಧ್ಯಕ್ಷ ಅಭಿಜಿತ ವಿಜಯಕುಮಾರ ಪಾಟೀಲ್‌, ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಬಾಬುರಾವ್‌ ಪಾಟೀಲ್‌, ಗ್ರಾಪಂ ಮಾಜಿ ಅಧ್ಯಕ್ಷ ರಾಜಕುಮಾರ ಪಾಟೀಲ್‌, ಬೀದರ್‌ ಕೃಷಿಕ ಸಮಾಜ ಅಧ್ಯಕ್ಷ ಅಭಿಮನ್ಯೂ ನಿರಗುಡೆ, ಪಿಕೆಪಿಎಸ್‌ ಮಾಜಿ ಅಧ್ಯಕ್ಷ ಶಿವಾಜಿರಾವ್‌ ರಘು ಪಾಲ್ಗೊಳ್ಳಲ್ಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ್‌, ಮನೋಹರ ದಾಡಗೆ, ಬಂಸಿಧರ ಪಾಟೀಲ್‌, ವೆಂಕಟರಾವ್‌ ಭಾಲ್ಕೆ, ಸಂಗಾರೆಡ್ಡಿ ಗೌರೆ ಹಾಗೂ ಕಿಶನ ನಾಯಕ ಇದ್ದರು.