ಅಕ್ರಮ ಮರಳು ಸಾಗಾಣಿಕೆ: 2 ಟ್ರ್ಯಾಕ್ಟರ್ ಜಪ್ತಿ, ಪ್ರತ್ಯೇಕ ಪ್ರಕರಣ ದಾಖಲು
1 Min read
Author : KannadaprabhaNewsNetwork
Published : Oct 10 2023, 01:00 AM IST
Share this Article
FB
TW
Linkdin
Whatsapp
ಫೊಟೊ(ï09ಎಂಡಿಎಲ್01) | Kannada Prabha
Image Credit: KP
ನಾಗಲಾಪೂರ ಗ್ರಾಮದ ಹತ್ತಿರದ ಹಳ್ಳದಿಂದ ಸರ್ಕಾರದ ಸ್ವತ್ತಾದ ಮರಳನ್ನು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ಎರಡು ಟ್ರ್ಯಾಕ್ಟರ್ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
ಮುದಗಲ್: ನಾಗಲಾಪೂರ ಗ್ರಾಮದ ಹತ್ತಿರದ ಹಳ್ಳದಿಂದ ಸರ್ಕಾರದ ಸ್ವತ್ತಾದ ಮರಳನ್ನು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ಎರಡು ಟ್ರ್ಯಾಕ್ಟರ್ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಮಸ್ಕಿ ತಾಲೂಕಿನ ಮೆದಕಿನಾಳ ಗ್ರಾಮದ ನಿಂಗಪ್ಪ ಎನ್ನುವ ಟ್ರ್ಯಾಕ್ಟರ್ ಮಾಲೀಕ ನಾಗಲಾಪೂರ ಹಳ್ಳದಿಂದ ಉಸಕುಸಾಗಿಸುತ್ತಿದ್ದ ಹಾಗೂ ರಾಮತ್ನಾಳ ಗ್ರಾಮದ ಮಂಜುನಾಥ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ನಲ್ಲಿ ಮರಳು ಸಾಗಿಸುತ್ತಿರುವುದನ್ನು ಮಾಹಿತಿ ಪಡೆದ ಮುದಗಲ್ ಪೊಲಿಸರು 2 ಟ್ರ್ಯಾಕ್ಟರ್ಗಳನ್ನು ಜಪ್ತಿಮಾಡಿಕೊಂಡು ಮುದಗಲ್ ಪಿಎಸ್ಐ ವೆಂಕಟೇಶ ನೇತೃತ್ವದ ತಂಡ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.