ಅರಸೀಕೆರೆಯಲ್ಲಿ ಕನ್ನಡ ಬಾವುಟ ಸ್ತಂಭ ಉದ್ಘಾಟನೆ

| Published : Nov 02 2025, 02:15 AM IST

ಸಾರಾಂಶ

ನ್ನಡ ಎನ್ನುವುದು ಕೇವಲ ಭಾಷೆಯಲ್ಲ ಇದು ನಾಡಿನ ಆತ್ಮ. ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತು ಶೌರ್ಯವನ್ನು ಹೊತ್ತಿರುವ ಜೀವಂತ ಪರಂಪರೆ. ಕನ್ನಡಿಗರು ವಿಶಾಲ ಹೃದಯದವರು, ಸಹಿಷ್ಣುತೆ ಮತ್ತು ಆತ್ಮಗೌರವದ ಮಾದರಿಯಾಗಿದ್ದಾರೆ ಎಂದು ಕರವೇ ತಾಲೂಕು ಅಧ್ಯಕ್ಷರಾದ ಕಿರಣ್ ಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ನಗರಸಭಾಧ್ಯಕ್ಷ ಸಮಿವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ವೆಂಕಟಮಣಿ, ಭಾಸ್ಕರ್, ಸಂತೋಷ್, ರಾಘು, ಕರಗುಂದ ನವೀನ್ ಕುಮಾರ್, ನೇತ್ರೇಶ್‌, ಬಾಣಾವರ ರಕ್ಷಿತ್ , ಅರ್ಜುನ್ ಗೌಡ, ಕಾಳನಕೊಪ್ಪಲು ರಾಜು ಇತರರು ಭಾಗವಹಿಸಿದ್ದರು.

ಅರಸೀಕೆರೆ: ಕನ್ನಡ ಎನ್ನುವುದು ಕೇವಲ ಭಾಷೆಯಲ್ಲ ಇದು ನಾಡಿನ ಆತ್ಮ. ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತು ಶೌರ್ಯವನ್ನು ಹೊತ್ತಿರುವ ಜೀವಂತ ಪರಂಪರೆ. ಕನ್ನಡಿಗರು ವಿಶಾಲ ಹೃದಯದವರು, ಸಹಿಷ್ಣುತೆ ಮತ್ತು ಆತ್ಮಗೌರವದ ಮಾದರಿಯಾಗಿದ್ದಾರೆ ಎಂದು ಕರವೇ ತಾಲೂಕು ಅಧ್ಯಕ್ಷರಾದ ಕಿರಣ್ ಕುಮಾರ್ ಹೇಳಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಹೊಸ ಕನ್ನಡ ಬಾವುಟದ ಧ್ವಜಸ್ತಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ನಗರಸಭಾಧ್ಯಕ್ಷ ಸಮಿವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ವೆಂಕಟಮಣಿ, ಭಾಸ್ಕರ್, ಸಂತೋಷ್, ರಾಘು, ಕರಗುಂದ ನವೀನ್ ಕುಮಾರ್, ನೇತ್ರೇಶ್‌, ಬಾಣಾವರ ರಕ್ಷಿತ್ , ಅರ್ಜುನ್ ಗೌಡ, ಕಾಳನಕೊಪ್ಪಲು ರಾಜು, ಬಾಣವರ ಪರಮೇಶ್, ಗಂಗಾಧರ್ ನಾಯಕ್ ಹಾಗೂ ಹನುಮಂತ್ ಸೇರಿದಂತೆ ಇತರರು ಭಾಗವಹಿಸಿದ್ದರು.