ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ ಇಲ್ಲಿಯ ಕಂಠಿ ವೀರಭದ್ರೇಶ್ವರ ದೇವಸ್ಥಾನದ ಹತ್ತಿರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸಾಯಿಬಾಬಾರ ದೊಡ್ಡ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಭಾನುವಾರ ಇಲ್ಲಿಯ ದೇವಸ್ಥಾನದಲ್ಲಿ ಭಕ್ತರಾದ ದೇವರಡ್ಡಿ ಭಕ್ತಿ ತಮ್ಮ ಇಷ್ಟಾರ್ಥ ಈಡೇರಿದ್ದರ ಹಿನ್ನೆಲೆಯಲ್ಲಿ ಸಾಯಿಬಾಬಾ ಅವರ ದೊಡ್ಡ ಮೂರ್ತಿಯನ್ನು ಭಕ್ತಿಯಿಂದ ಸಮರ್ಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾದಾಮಿ
ಇಲ್ಲಿಯ ಕಂಠಿ ವೀರಭದ್ರೇಶ್ವರ ದೇವಸ್ಥಾನದ ಹತ್ತಿರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸಾಯಿಬಾಬಾರ ದೊಡ್ಡ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಭಾನುವಾರ ಇಲ್ಲಿಯ ದೇವಸ್ಥಾನದಲ್ಲಿ ಭಕ್ತರಾದ ದೇವರಡ್ಡಿ ಭಕ್ತಿ ತಮ್ಮ ಇಷ್ಟಾರ್ಥ ಈಡೇರಿದ್ದರ ಹಿನ್ನೆಲೆಯಲ್ಲಿ ಸಾಯಿಬಾಬಾ ಅವರ ದೊಡ್ಡ ಮೂರ್ತಿಯನ್ನು ಭಕ್ತಿಯಿಂದ ಸಮರ್ಪಿಸಿದ್ದಾರೆ. ಜತೆಗೆ ರಾಚಣ್ಣ ಪಟ್ಟಣದ ಕುಟುಂಬಸ್ಥರು ದೇವಸ್ಥಾನದ ಆವರಣದಲ್ಲಿ ನವಗ್ರಹ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಹಕಾರ ನೀಡಿದ್ದು, ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ, ದೇವರಡ್ಡಿ ಮತ್ತು ಪಟ್ಟಣದ ಕುಟುಂಬಸ್ಥರ ಹಾಗೂ ಭಕ್ತರ ಸಮ್ಮುಖದಲ್ಲಿ ಪ್ರತಿಷ್ಟಾಪಣಾ ಕಾರ್ಯ ಯಶಸ್ವಿಯಾಗಿ ನೆರವೇರಿತು.ಈ ಸಂದರ್ಭದಲ್ಲಿ ಸುನೀಲ ಕಾರುಡಗಿಮಠ, ಸಂಜೀವ ಬರಗುಂಡಿ, ಈರಣ್ಣ ಪಟ್ಟಣದ, ಎನ್.ಎಸ್.ದೀಕ್ಷಿತ, ಎಂ.ಆರ್.ಮಲ್ಲಾಪೂರ, ಕಮಲಮ್ಮ ಜಿಗಬಡ್ಡಿ, ಸ್ವಪ್ನಾ ಪಟ್ಟಣದ, ಕವಿತಾ ಬಂಗಾರಶೆಟ್ಟರ, ಗೌರಮ್ಮ ಚಿನಿವಾಲರ, ಶ್ರೀಮತಿ ಮಲ್ಲಾಪೂರ, ಶೇಖಣ್ಣ ಭಿಕ್ಷಾವತಿಮಠ, ಭೀಮಸಿ ಬೀರಕಬ್ಬಿ, ರಾಕೇಶ ಕಲಾಲ, ಈರಣ್ಣ ಆಲೂರ ದೇವಸ್ಥಾನ ಅಭಿವೃದ್ಧಿ ಸಮಿತಿ ಸರ್ವ ಹಾಗೂ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.