ಹನಿಟ್ರ್ಯಾಪ್ ಆಗುವವರದ್ದೆ ತಪ್ಪು: ಸಚಿವ ಮಂಕಾಳು ವೈದ್ಯ

| Published : Mar 26 2025, 01:30 AM IST

ಹನಿಟ್ರ್ಯಾಪ್ ಆಗುವವರದ್ದೆ ತಪ್ಪು: ಸಚಿವ ಮಂಕಾಳು ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳಬೇಕಲ್ಲ? ಮಾತನಾಡುವ ಮೊದಲು ಯೋಚನೆ ಮಾಡಿ ಮಾತನಾಡಬೇಕಿತ್ತು. ಹನಿಟ್ರ್ಯಾಪ್ ಆಗಿದ್ದೇಯಾದರೆ ಯಾರು ಆಗಿದ್ದಾರೋ ಅವರಷ್ಟು ತಪ್ಪು ಯಾರೂ ಮಾಡಿಲ್ಲ ಎಂದಾಗುತ್ತದೆ.

ಕಾರವಾರ: ಹನಿಟ್ರ್ಯಾಪ್ ಯಾರಿಗೂ ಮಾಡಲು, ಮಾಡಿಸಲು ಆಗುವುದಿಲ್ಲ. ನಾವು ಮಾಡುವ ತಪ್ಪಿಗೆ ನಾವೇ ಜವಾಬ್ದಾರರೆ ಹೊರತು ಯಾರೋ ಮಾಡಿಸಿದ್ದಾರೆ ಎನ್ನುವುದು ಸರಿಯಲ್ಲ ಎಂದು ಹೇಳುವ ಮೂಲಕ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ, ಸಚಿವ ಕೆ ಎನ್.ರಾಜಣ್ಣ ಅವರಿಗೆ ಟಾಂಗ್ ನೀಡಿದ್ದಾರೆ.

ಮಂಗಳವಾರ ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿವಿ, ಪತ್ರಿಕೆಯಲ್ಲಿ ಇದು ಬರಬಾರದಿತ್ತು. ಯಾರನ್ನಾದರು ಕರೆದುಕೊಂಡು ಹೋಗಿ ಟ್ರ್ಯಾಪ್ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳಬೇಕಲ್ಲ? ಮಾತನಾಡುವ ಮೊದಲು ಯೋಚನೆ ಮಾಡಿ ಮಾತನಾಡಬೇಕಿತ್ತು. ಹನಿಟ್ರ್ಯಾಪ್ ಆಗಿದ್ದೇಯಾದರೆ ಯಾರು ಆಗಿದ್ದಾರೋ ಅವರಷ್ಟು ತಪ್ಪು ಯಾರೂ ಮಾಡಿಲ್ಲ ಎಂದಾಗುತ್ತದೆ. ಯತ್ನಾಳ್ ಹಿರಿಯ ಶಾಸಕರು ಯಾರೇ ಚೀಟಿ ಕೊಟ್ಟರೂ ಅವರಿಗೆ ಬುದ್ಧಿ ಇಲ್ಲವೇ? ಅವರ ಮೇಲೆ ಇವರು, ಇವರ ಮೇಲೆ ಅವರು ಹಾಕುತ್ತಿದ್ದಾರೆ. ಚೀಟಿ ಕೊಡುವ ಮುಂಚೆ ಅವರಿಗೆ ಗೊತ್ತಿರಲಿಲ್ಲವೇ? ಸದನದಲ್ಲಿ ಈ ವಿಚಾರ ಮಾತನಾಡಬಾರದಿತ್ತು. ಈ ವಿಚಾರ ಮಾಧ್ಯಮದವರು, ಸಚಿವರು, ಎಲ್ಲರೂ ಬಿಡಬೇಕು. ಆಗ ಮಾತ್ರ ನಮಗೆ ಸಮಾಜದಲ್ಲಿ ಗೌರವ ಇರುತ್ತದೆ. ಇಲ್ಲದಿದ್ದರೆ ಕೆಟ್ಟ ದೃಷ್ಠಿಯಲ್ಲಿ ಜನ ನೋಡುತ್ತಾರೆ ಎಂದು ಅಭಿಪ್ರಾಯಿಸಿದರು.