ಸಾರಾಂಶ
ಜನಿವಾರ ಧರಿಸುವ ಸಂಪ್ರದಾಯ ತಲೆ ತಲೆಮಾರುಗಳ ಮೂಲಕ ಬ್ರಾಹ್ಮಣರಿಗೆ ಬಂದ ಬಳುವಳಿಯಾಗಿ ಬಂದಿದೆ. ಇಂತಹ ಸಂಪ್ರದಾಯವನ್ನು ಅವಮಾನ ಮಾಡುವ ಜನರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟು ನಿಟ್ಟಾಗಿ ಕಾನೂನು ಕ್ರಮ ಕೈಗೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮುಳಬಾಗಿಲು
ಸಿಇಟಿ ಪರೀಕ್ಷೆಗೆ ಹೋದ ವಿದ್ಯಾರ್ಥಿಗೆ ಅಲ್ಲಿನ ಸಿಬ್ಬಂದಿ ಜನಿವಾರ ತೆಗೆಸಿರುವುದು ಖಂಡಿಸಿ ತಾಲೂಕು ಬ್ರಾಹ್ಮಣ ಸೇವಾ ಸಂಘ ಸೇರಿದಂತೆ ತಾಲೂಕಿನ ಹಿಂದೂಪರ ಸಂಘಟನಾ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ರಾಜ್ಯದ ಬೀದರ್, ತೀರ್ಥಹಳ್ಳಿ, ಸಾಗರ, ಧಾರವಾಡ ಮುಂತಾದ ಕಡೆ ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ವಿಪ್ರ ಬಂಧುಗಳ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮೊದಲು ತಪಾಸಣೆ ನಡೆಸಿ ಅವರು ಧರಿಸಿದ್ದ ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿರುವುದು ಖಂಡನೀಯ ಎಂದು ಹಿಂದೂಪರ ಸಂಘಟನಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ತಪ್ಪಿತಸ್ಥರ ಗಡಿಪಾರು ಮಾಡಿ
ಬ್ರಾಹ್ಮಣ ಸಮುದಾಯವು ತನ್ನ ಪಾಡಿಗೆ ತಮ್ಮ ಕುಲ ವೃತ್ತಿ ಮಾಡುತ್ತಿದೆ. ಜನಿವಾರ ಧರಿಸುವ ಸಂಪ್ರದಾಯ ತಲೆ ತಲೆಮಾರುಗಳ ಮೂಲಕ ನಮಗೆ ಬಳುವಳಿಯಾಗಿ ಬಂದಿದೆ. ಇಂತಹ ಸಂಪ್ರದಾಯವನ್ನು ಅವಮಾನ ಮಾಡುವ ಜನರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟು ನಿಟ್ಟಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಮಾವು ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ.ಕೆ.ವಾಸುದೇವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೋಲಾರ ಜಿಲ್ಲೆ ಪ್ರತಿನಿಧಿಆನಂದ ಕುಮಾರ್ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಬಲ್ಲಂ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಹರೀಶ್, ಕಾರ್ಯದರ್ಶಿಗಳಾದ ಗಣೇಶ, ಸುರೇಶ್, ಖಜಾಂಚಿ ಕೆಇಬಿ ಸತ್ಯಣ್ಣ, ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ತಾಯಲೂರು ಮಂಜುನಾಥ್, ಗುರುಮೂರ್ತಿ, ಪುರೋಹಿತ ಸಂಘದ ಅಧ್ಯಕ್ಷ ನಾಗಭೂಷಣಾಚಾರ, ಜನಾ ಮಂಡಳಿ ಅಧ್ಯಕ್ಷೆ ಪದ್ಮಾವತಮ್ಮ, ಸುಧಾ ರವೀಂದ್ರ, ಮುಖಂಡರಾದ ಶಂಕರ್ ಕೇಸರಿ, ನಂದ ಕಿಶೋರ್, ಕಿಟ್ಟಿ, ಶ್ರೀನಿಧಿ, ರಘು ಕಾಪರ್ತಿ ಅಮರ್ ಇದ್ದರು.