ಕನ್ನಡ ಕಲರವ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗೆ ಆಹ್ವಾನ

| Published : Jun 18 2025, 11:49 PM IST

ಕನ್ನಡ ಕಲರವ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗೆ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ವತಿಯಿಂದ ಕನ್ನಡ ಕಲರವ -೨ ಕಾರ್ಯಕ್ರಮವನ್ನು ಆ.8ರಂದು ಆಯೋಜಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಆ.2ರಂದು ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ , ಭಾಷಣ ಸ್ಪರ್ಧೆ, ಹಾಗೂ ಸ್ವ ರಚಿತ ಕವನ ಸ್ಪರ್ಧೆ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ವತಿಯಿಂದ ಕನ್ನಡ ಕಲರವ -೨ ಕಾರ್ಯಕ್ರಮವನ್ನು ಆ.8ರಂದು ಆಯೋಜಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಆ.2ರಂದು ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ , ಭಾಷಣ ಸ್ಪರ್ಧೆ, ಹಾಗೂ ಸ್ವ ರಚಿತ ಕವನ ಸ್ಪರ್ಧೆ ಆಯೋಜಿಸಲಾಗಿದೆ.ಸ್ಪರ್ಧೆಯು ಹಿರಿಯ ಪ್ರಾಥಮಿಕ , ಪ್ರೌಢ , ಕಾಲೇಜು ವಿಭಾಗದಲ್ಲಿ ನಡೆಯಲಿದ್ದು, ಭಾಗವಹಿಸಲಿಚ್ಚಿಸುವ ವಿದ್ಯಾರ್ಥಿಗಳು ಸೆ.20ರೊಳಗೆ ತಮ್ಮ ತಮ್ಮ ಹೆಸರನ್ನು ಶಾಲಾ ಮುಖ್ಯೋಪಾಧ್ಯಾಯರ ದೃಢೀಕರಣದೊಂದಿಗೆ ಸಲ್ಲಿಸಲು ಕೋರಲಾಗಿದೆ.ಪ್ರಬಂಧ ಸ್ಪರ್ಧೆ ಯ ವಿಷಯ: ನಾ ಕಂಡ ತೆರೆಮರೆಯ ಸ್ವಾತಂತ್ರ್ಯ ಯೋಧ (ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಉಳಿದಿರುವ ದೇಶಕ್ಕಾಗಿ ಪ್ರಾಣಾರ್ಪಣೆ ಗೈದಿರುವ ಸ್ವಾತಂತ್ರ್ಯ ಯೋಧರ ಬಗ್ಗೆ ಬೆಳಕು ಚೆಲ್ಲುವ ಬರಹ), ಭಾಷಣ ಸ್ಪರ್ಧೆಯಲ್ಲಿ: ಹಿರಿಯ ಪ್ರಾಥಮಿಕ ವಿಭಾಗ: ಅಪರೇಷನ್ ಸಿಂದೂರ, ಪ್ರೌಢ ವಿಭಾಗ: ಜಗತ್ತಿನ ಶ್ರೇಷ್ಠ ರಾಷ್ಟ್ರವಾಗಿ ಮುನ್ನುಗ್ಗುತ್ತಿರುವ ಭಾರತ , ಕಾಲೇಜು ವಿಭಾಗ: ನವ ಭಾರತ ನಿರ್ಮಾಣದಲ್ಲಿ ದೇಶ ಎದುರಿಸುತ್ತಿರುವ ಸವಾಲುಗಳು. ಸ್ವರಚಿತ ಕವನ ವಾಚನ ವಿಷಯ: ನಮ್ಮ ದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಆಧರಿಸಿ ಸ್ವ ರಚಿಸಿದ ಕವನ ವಾಚಿಸುವುದು . ಸ್ಪರ್ಧೆ ಆ.2ರಂದು ಅಪರಾಹ್ನ 2ರಿಂದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ನಡೆಯಲಿದೆ. ವಿಜೇತರಿಗೆ ಬಹುಮಾನವನ್ನು ಆ.9ರಂದು ಮಧ್ಯಾಹ್ನ ನಡೆಯಲಿರುವ ಕನ್ನಡ ಕಲರವ -೨ ರ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ : 9743687614, 9591340959 ಸಂಪರ್ಕಿಸುವಂತೆ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಕಾರ ಸುವರ್ಣ ತಿಳಿಸಿದ್ದಾರೆ.