ತರೀಕೆರೆ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ್ರು ಬಣ)ತರೀಕೆರೆ ಮಹಿಳಾ ಘಟಕದ ಪದಗ್ರಹಣ ಕಾರ್ಯ ಕ್ರಮದಲ್ಲಿ ತಾಲೂಕು ಅಧ್ಯಕ್ಷರ ಸಮಕ್ಷಮದಲ್ಲಿ ಮಹಿಳಾ ಘಟಕ ಅಧ್ಯಕ್ಷ ಉಷಾ, ನೇತ್ರಾವತಿ ಗೌರವಾಧ್ಯಕ್ಷರಾಗಿ, ಮಂಜುಳಾ ಉಪಾಧ್ಯಕ್ಷರಾಗಿ, ಭಾಗ್ಯ ಮಹಿಳಾ ಘಟಕದ ಕಾರ್ಯದರ್ಶಿಯಾಗಿ, ಮಾಧುರಿ ಸಹ ಕಾರ್ಯದರ್ಶಿಯಾಗಿ, ಸಂಘಟನಾ ಕಾರ್ಯದರ್ಶಿಯಾಗಿ ರೇಣುಕಾ ಸಹ ಸಂಘಟನಾ ಕಾರ್ಯದರ್ಶಿಯಾಗಿ ಕವಿತಾ ಇವರನ್ನು ನೇಮಿಸಲಾಗಿದೆ. ತರೀಕೆರೆ ತಾಲೂಕು ರಕ್ಷಣಾ ವೇದಿಕೆ (ನಾರಾಯಣಗೌಡ್ರು ಬಣ) ಅಧ್ಯಕ್ಷ ಬಿಪಿ ಚಂದ್ರಶೇಖರ್ ಮಾತನಾಡಿ ರಕ್ಷಣಾ ವೇದಿಕೆಗೆ ಮತ್ತು ಕನ್ನಡ ನಾಡಿಗೆ ಕನ್ನಡ ಜನತೆಗೆ ನೀರು ನೆಲ ಜಲ ಇದರ ಬಗ್ಗೆ ಹೋರಾಡಲು ಕಂಕಣ ಬದ್ಧವಾಗಿ ನಿಲ್ಲೋಣ, ರಕ್ಷಣಾ ವೇದಿಕೆಯನ್ನು ಸಂಘಟನೆಗೊಳಿಸೋಣ ಮತ್ತು ಬಲಗೊಳಿಸೋಣ ಎಂದು ತಿಳಿಸಿದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

-

3ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ್ರು ಬಣ)ಮಹಿಳಾ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಯಿತು. ತಾಲೂಕು ರಕ್ಷಣಾ ವೇದಿಕೆ (ನಾರಾಯಣಗೌಡ್ರು ಬಣ) ಅಧ್ಯಕ್ಷ ಬಿಪಿ ಚಂದ್ರಶೇಖರ್ ಮತ್ತಿತರರು ಇದ್ದಾರೆ.