ಆರೋಗ್ಯ ಉಚಿತ ತಪಾಸಣಾ ಶಿಬಿರ 13ರಂದು ಬೆಳಗ್ಗೆ 9ರಿಂದ ಅಪರಾಹ್ನ 1.30ರ ತನಕ ಕಾರ್ಕಳ ಬಿಲ್ಲವ ಸಂಘದ ‌ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ.

ಕಾರ್ಕಳ: ಬ್ಲಾಕ್ ಕಾಂಗ್ರೆಸ್ ಕಾರ್ಕಳ ಮಾರ್ಗದರ್ಶನದಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ಆಯುರ್ವೇದ ಆಸ್ಪತ್ರೆ, ಆಳ್ವಾಸ್ ಪಿಸಿಯೋಥೆರಪಿ ಕಾಲೇಜು, ನೋವಾ ಐವಿಎಫ್ ಫರ್ಟಿಲಿಟಿ‌ ಮಂಗಳೂರು ಹಾಗೂ ಪ್ರಸಾದ್ ನೇತ್ರಾಲಯ ಆಶ್ರಯದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ 13ರಂದು ಬೆಳಗ್ಗೆ 9ರಿಂದ ಅಪರಾಹ್ನ 1.30ರ ತನಕ ಕಾರ್ಕಳ ಬಿಲ್ಲವ ಸಂಘದ ‌ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ.

ಈ ಶಿಬಿರದಲ್ಲಿ ಗರ್ಭಕೋಶದ ಅರ್ಬುದ ಕಾಯಿಲೆ ತಪಾಸಣೆ, ಬಂಜೆತನ‌ ತಪಾಸಣೆ, ವಿಶೇಷ ಫಿಜಿಯೋಥೆರಪಿ ಚಿಕಿತ್ಸೆ, ನೇತ್ರ ತಪಾಸಣೆ, ಇಸಿಜಿ, ರಕ್ತದಾನ,‌ ರಕ್ತದಲ್ಲಿ ಸಕ್ಕರೆ ಅಂಶ ತಪಾಸಣೆ ಹಾಗೂ ಎಲ್ಲಾ ಸ್ರೀರೋಗ ಮತ್ತು ಪ್ರಸೂತಿ ಸಂಬಂಧಿಸಿದ ಸಮಸ್ಯೆಗಳಿಗೆ ಸಮಾಲೋಚನೆ ಮೊದಲಾದ ಸೇವೆ ಉಚಿತವಾಗಿ ನಡೆಸಲಾಗುವುದು.

ತಜ್ಞ ವೈದ್ಯರಾದ ಡಾ.ಹಾನಾ ಶೆಟ್ಟಿ, ಡಾ. ಶವೀಝ್ ಫೈಝಿ, ಡಾ.ಅರ್ಜುನ್ ಬಲ್ಲಾಳ್, ಡಾ.ಹರ್ಷಿತ್ ಜಿ.ಸಿ, ಡಾ.ಶ್ರಾವ್ಯ ಆಳ್ವಾ, ಡಾ.ಐಶ್ವರ್ಯ, ಡಾ.ಶ್ವೇತ ಸಿ. ಪೂಜಾರಿ, ಡಾ. ರೀನಝ್ ಬೇಗಂ ಮೊದಲಾದವರ ಸೇವೆ ಲಭ್ಯವಿರುತ್ತದೆ.ಆಳ್ವಾಸ್ ಸಂಸ್ಥೆಯ ಡಾ. ಹಾನಾ ಶೆಟ್ಟಿ ಉದ್ಘಾಟಿಸಲಿದ್ದು ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಶ್ರೀ ನಾರಾಯಣ ಗುರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಂಜುನಾಥ್ ಪೂಜಾರಿ, ಆಳ್ವಾಸ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ವಿನಯ್ ಆಳ್ವಾ, ಬ್ಲಾಕ್ ಅಧ್ಯಕ್ಷ ಶುಭದರಾವ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜೋತಿ ಹೆಬ್ಬಾರ್, ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಭಾನು ಬಾಸ್ಕರ್ ಫೂಜಾರಿ ಹಾಗೂ ಪಕ್ಷದ ಹಿರಿಯ ಮುಂಡರು ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತಿಳಿಸಿದ್ದಾರೆ.