ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್ ವತಿಯಿಂದ ಕಾರುಗುಂದದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್ ವತಿಯಿಂದ ಕಾರುಗುಂದದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮ ನೆರವೇರಿತು.

ಕಾರುಗುಂದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಪರ್ವೀನ್ ತಾಜ್ ಅಧ್ಯಕ್ಷತೆ ವಹಿಸಿದ್ದರು. ನಟೋಳಂಡ ಜಯರಾಜ್ ಉದ್ಘಾಟಿಸಿದರು.

ಕೊಡವ ಸಮಾಜ ಚೇರಾಂಬಾಣೆಯ ಉಪಾಧ್ಯಕ್ಷ ನಾಪಂಡ ಪ್ರತಾಪ್, ಪೊಲೀಸ್ ಅಧಿಕಾರಿ ಬೈಚನ ಉತ್ತಪ್ಪ, ಕುಟ್ಟೆಟ್ಟಿರ ಕುಟ್ಟಪ್ಪ, ಒಕ್ಕೂಟದ ಅಧ್ಯಕ್ಷರಾದ ಜಯಂತಿ ಹಾಗೂ ಮೀನಾಕ್ಷಿ ಮತ್ತಿತರರಿದ್ದರು.

ಶಾಲಾ ಆವರಣದಲ್ಲಿ ಅತಿಥಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಗಿಡ ನೆಟ್ಟರು.