ರೈಲ್ವೆ ಸಚಿವರಿಗೆ ಕರವೇ ಮುಖಂಡರ ಭೇಟಿ : ಮನವಿ

| Published : Sep 04 2024, 01:54 AM IST

ಸಾರಾಂಶ

Karway leaders' visit to Railway Minister: Appeal

ಕನ್ನಡಪ್ರಭ ವಾರ್ತೆ ಯಾದಗಿರಿ

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ. ಎನ್. ಭೀಮುನಾಯಕ ನೇತೃತ್ವದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾದ ನಿಯೋಗ, ಯಾದಗಿರಿ ರೈಲ್ವೆ ನಿಲ್ದಾಣದಿಂದ ಹಾದು ಹೋಗುವ 13 ಪ್ರಮುಖ ರೈಲುಗಳ ನಿಲುಗಡೆ ಹಾಗೂ ರೈಲು ನಿಲ್ದಾಣವನ್ನು "ಸಿ " ದರ್ಜೆಯಿಂದ "ಬಿ " ದರ್ಜೆಗೆ ಏರಿಸುವ ಕುರಿತು ಅವರ ಜೊತೆ ಮಾತನಾಡಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿದ್ದು ನಾಯಕ ಹತ್ತಿಕುಣಿ, ಅಂಬರೀಶ್ ಹತ್ತಿಮನಿ, ಸಾಹೇಬಗೌಡ ಗೌಡಗೇರಿ. ಯಮನಯ್ಯ ಗುತ್ತೇದಾರ್, ಸಿದ್ದಪ್ಪ ಕೊಯಿಲೂರ್, ಸಿದ್ದಪ್ಪ ಕ್ಯಾಸಪ್ಪನಳ್ಳಿ, ಶರಣಬಸಪ್ಪ ಎಲೇರಿ, ಅಬ್ದುಲ್ ಅದಿಮನಿ, ಅಬ್ದುಲ್ ರಿಯಾಜ್, ರವಿ ಜಮ್ಮರ್, ಬಸು ನಾಯಕ್, ಸಿದ್ದು ಸಾಹುಕಾರ, ಮರೆಪ್ಪ ಕಡ್ಡಿ, ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.

-----

ಫೋಟೊ:

3ವೈಡಿಆರ್13 : ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ. ಎನ್. ಭೀಮುನಾಯಕ ನೇತೃತ್ವದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ, ಮನವಿ ಸಲ್ಲಿಸಿದರು.