ಸಾರಾಂಶ
ಎಲೆಕ್ಟ್ರಾನಿಕ್ ಸಿಟಿಯ ಹೊಸೂರು- ಬೆಂಗಳೂರು ಮುಖ್ಯರಸ್ತೆ ಬಿದ್ದ ಬಾರಿ ಮಳೆಗೆ ಸಂಪೂರ್ಣ ಜಲಾವೃತವಾಗಿ ಕಿಲೋಮೀಟರ್ ಗಟ್ಟಲೇ ರಸ್ತೆ ದಟ್ಟಣೆ ಉಂಟಾಗಿತ್ತು.
ಬೆಂಗಳೂರು ದಕ್ಷಿಣ: ಎಲೆಕ್ಟ್ರಾನಿಕ್ ಸಿಟಿಯ ಹೊಸೂರು- ಬೆಂಗಳೂರು ಮುಖ್ಯರಸ್ತೆ ಬಿದ್ದ ಬಾರಿ ಮಳೆಗೆ ಸಂಪೂರ್ಣ ಜಲಾವೃತವಾಗಿ ಕಿಲೋಮೀಟರ್ ಗಟ್ಟಲೇ ರಸ್ತೆ ದಟ್ಟಣೆ ಉಂಟಾಗಿತ್ತು.
ಮಳೆಗೆ ತತ್ತರಿಸಿದ ಐಟಿಬಿಟಿ ಮಂದಿ ಹಾಗೂ ವಾಹನ ಸವಾರರು ಆಳೆತ್ತರದ ನೀರಿನಲ್ಲಿ ಸಂಚರಿಸಲಾಗದೆ ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗಲೂ ವೀರಸಂದ್ರ ಸಮೀಪದ ರಸ್ತೆ ಮುಳುಗಡೆಯಾಗುತ್ತದೆ. ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕತೆಯಿಂದ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಜನರ ಪರದಾಟಪಡುವಂತಾಗಿದೆ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ.ಹೆದ್ದಾರಿಯ ನೀರಿನಲ್ಲಿ ಹಲವು ಕಾರುಗಳು ಮುಳುಗಡೆಯಾಗಿದ್ದು, ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ತಲೆ ಕೆಡಿಸಿಕೊಳ್ಳದ ಹೆದ್ದಾರಿ ಪ್ರಾದಿಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.