ಕುಶಾಲನಗರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕುಶಾಲನಗರದಲ್ಲಿ ರಂಗಭಾರತಿ ಕಲಾಮಂದಿರಂ ಆಶ್ರಯದಲ್ಲಿ ಯೋಗ ಶಿಕ್ಷಕ ಸಂಕೇತ್ ಮಾಸ್ಟರ್ ಮಾರ್ಗದರ್ಶನದಲ್ಲಿ ಸ್ಥಳೀಯ ಅನುಗ್ರಹ ಕಾಲೇಜು ಆವರಣದಲ್ಲಿ ಯೋಗ ದಿನಾಚರಣೆ ನಡೆಯಿತು.

ವಿವಿಧ ಪ್ರಾಕಾರದ ಆಸನಗಳು ಪ್ರಾಣಾಯಾಮ ಧ್ಯಾನ ನಡೆಯಿತು. ಡಾ. ಶಶಾಂಕ್ ಹತ್ವಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾರ್ವಜನಿಕವಾಗಿ ನಡೆದ ಯೋಗ ಕಾರ್ಯಕ್ರಮದಲ್ಲಿ ರಂಗ ಭಾರತಿ ಕಲಾಮಂದಿರಂ ಮುಖ್ಯಸ್ಥರಾದ ನವ್ಯ, ಪ್ರಮುಖರಾದ ಮಹೇಶ್ ಅಮೀನ್ ದಿನೇಶ್ ಮತ್ತಿತರರು ಇದ್ದರು.