ಚನ್ನರಾಯಪಟ್ಟಣ: ಧರ್ಮ, ಸಂಸ್ಕೃತಿ, ಹಬ್ಬಗಳು, ಜಾತ್ರೆಗಳು, ಆಚಾರವಿಚಾರಗಳು ಉಳಿದಿವೆ ಎಂದರೆ ಅದು ಗ್ರಾಮೀಣ ಭಾಗದಲ್ಲಿ ಮಾತ್ರ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಎ. ಗೋಪಾಲಸ್ವಾಮಿ ತಿಳಿಸಿದರು.ಅವರು ಪಟ್ಟಣದ ಸಮೀಪದ ಗುಲಸಿಂದ ಗ್ರಾಮದ ಪವಿತ್ರ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಜನರ ಭಾವನೆಗಳು, ಕುಟುಂಬಗಳ ಸಮ್ಮಿಲನ ಹಬ್ಬಗಳಲ್ಲಿ ಮಾತ್ರ, ಆದ್ದರಿಂದ ಹಳ್ಳಿಗಳ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ದೇವರ ದರ್ಶನ ಪಡೆದು ತಾಲೂಕಿಗೆ ಉತ್ತಮ ಮಳೆ, ಬೆಳೆಯಾಗಿ ಜನರ ಜೀವನ ಉತ್ತಮವಾಗಿದ್ದು ನೀರಿನ ಅಭಾವ ಬರದ ರೀತಿ ದೇವರಲ್ಲಿ ಬೇಡಿಕೊಂಡಿದ್ದೇವೆ, ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಪ್ರಾಮಾಣಿಕವಾಗಿ ನಮ್ಮ ಸರ್ಕಾರದಿಂದ ಮಾಡಿದ್ದೇವೆ ಎಂದರು.ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಗುಲಸಿಂದ ಜನಾರ್ದನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಲಸಿಂದ ಶಿವರಾಜು, ಕಾಂಗ್ರೆಸ್ ಮುಖಂಡ ವಡ್ಡರಹಳ್ಳಿ ಮೋಹನ್, ಕುರುವಂಕ ನಾಗಣ್ಣ ಮತ್ತಿತರಿದ್ದರು.
ಗುಲಸಿಂದದಲ್ಲಿ ಲಕ್ಷ್ಮೀ ರಂಗನಾಥಸ್ವಾಮಿ ರಥೋತ್ಸವ
ಗುಲಸಿಂದ ಗ್ರಾಮದ ಪವಿತ್ರ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಜನರ ಭಾವನೆಗಳು, ಕುಟುಂಬಗಳ ಸಮ್ಮಿಲನ ಹಬ್ಬಗಳಲ್ಲಿ ಮಾತ್ರ, ಆದ್ದರಿಂದ ಹಳ್ಳಿಗಳ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ದೇವರ ದರ್ಶನ ಪಡೆದು ತಾಲೂಕಿಗೆ ಉತ್ತಮ ಮಳೆ, ಬೆಳೆಯಾಗಿ ಜನರ ಜೀವನ ಉತ್ತಮವಾಗಿದ್ದು ನೀರಿನ ಅಭಾವ ಬರದ ರೀತಿ ದೇವರಲ್ಲಿ ಬೇಡಿಕೊಂಡಿದ್ದೇವೆ, ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಪ್ರಾಮಾಣಿಕವಾಗಿ ನಮ್ಮ ಸರ್ಕಾರದಿಂದ ಮಾಡಿದ್ದೇವೆ ಎಂದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.