ಸಾರಾಂಶ
ಕಳೆದ ೨೦ ವರ್ಷದಿಂದ ನಡಿಗೇರಿ ಕುಟುಂಬದವರು ಗೋವಿಂದ, ಶರೀಫರ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹದಂತಹ ಉತ್ತಮ ಸಾಮಾಜಿಕ ಕೆಲಸವನ್ನು ಮಾಡಿಕೊಂಡು ಬಂದಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ
ಮುಂಡಗೋಡ: ದುರಾಸೆ, ದುರ್ವ್ಯಸನ ಹಾಗೂ ಡಾಂಬಿಕ ಜೀವನ ಬಿಟ್ಟು ಸರಳ ಸಜ್ಜನಿಕೆಯ ಬದುಕು ಸಾಗಿಸುವಂತೆ ರುದ್ರಮುನಿ ಹಿರೇಮಠ ಶ್ರೀ ಕರೆ ನೀಡಿದರು.ಭಾನುವಾರ ಅವರು ಮುಂಡಗೋಡ ತಾಲೂಕಿನ ಇಂದೂರ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಗೋವಿಂದ ಶರೀಫರ 20ನೇ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಿ. ಉತ್ತಮ ಶಿಕ್ಷಣ ನೀಡಿ ಎಂದರು.
ಸಮಾರಂಭ ಉದ್ಘಾಟಿಸಿದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಮಾತನಾಡಿ, ಕಳೆದ ೨೦ ವರ್ಷದಿಂದ ನಡಿಗೇರಿ ಕುಟುಂಬದವರು ಗೋವಿಂದ, ಶರೀಫರ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹದಂತಹ ಉತ್ತಮ ಸಾಮಾಜಿಕ ಕೆಲಸವನ್ನು ಮಾಡಿಕೊಂಡು ಬಂದಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ.ಪಾಟೀಲ ಮಾತನಾಡಿ, ಧರ್ಮಸಭೆಯು ಎಲ್ಲರಿಗೂ ಜಾಗೃತಿ ಸಭೆಯಾಗಿ ಮಾರ್ಪಟ್ಟಿದೆ. ಇಂಥ ಒಂದು ಉತ್ತಮ ಕಾರ್ಯ ಮಾಡಿದ ನಡಿಗೇರಿ ಕುಟುಂಬದವರಿಗೆ ಅಭಿನಂದನೆ ಸಲ್ಲಿಸಿದರು.
ಬಿ.ಕೆ. ಪಾಟೀಲ, ದೇವೇಂದ್ರ ಕೆಂಚಗೊಣ್ಣನವರ್, ಪತ್ರಕರ್ತ ರಾಜಶೇಖರ ನಾಯ್ಕ ಮುಖಂಡರಾದ ಎಂ.ಆರ್. ಬಾಳೆಕಾಯಿ, ಬಸವರಾಜ ಸಂಗಮೇಶ್ವರ, ಎಂ.ಐ. ನಡಗೇರಿ, ಧರ್ಮರಾಜ ನಡಗೇರಿ, ಚಿದಾನಂದ ಹರಿಜನ, ಚಿದಾನಂದ ಪಾಟೀಲ, ಗಂಗಾಧರ ಬಡಿಗೇರ ಇದ್ದರು.ಮುಂಡಗೋಡ ತಾಲೂಕಿನ ಇಂದೂರ ಗ್ರಾಮದ ಗೋವಿಂದ ಶರೀಫರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.