ಸಾರಾಂಶ
ಎಂ.ಪಿ.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ 2025-26ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಉದ್ಘಾಟನೆ, ವಾರ್ಷಿಕ ಪ್ರತಿಭಾ ದಿನಾಚರಣೆ ಮತ್ತು ಕಾಲೇಜಿನ ನವೀಕೃತ ಸೆಮಿನಾರ್ ಹಾಲ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಆದ್ಯತೆ ಮತ್ತು ಆಸಕ್ತಿ ಎರಡೂ ವಿದ್ಯಾರ್ಥಿ ಜೀವನದ ಧ್ಯೇಯವಾಗಬೇಕು. ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿಯೇ ಭವಿಷ್ಯದಲ್ಲಿ ತಮ್ಮ ಆದ್ಯತೆ ಮತ್ತು ಆಸಕ್ತಿ ಯಾವುದಾಗಬೇಕು ಎನ್ನುವುದುನ್ನು ನಿರ್ಧರಿಸಬೇಕು. ಬರೀ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯೋಚನೆ ಸೀಮಿತವಾಗಬಾರದು ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.ಅವರು ಎಂ.ಪಿ.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ 2025-26ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಉದ್ಘಾಟನೆ, ವಾರ್ಷಿಕ ಪ್ರತಿಭಾ ದಿನಾಚರಣೆ ಮತ್ತು ಕಾಲೇಜಿನ ನವೀಕೃತ ಸೆಮಿನಾರ್ ಹಾಲ್ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭ ಕಾಲೇಜು ಹೊರಾಂಗಣ ಸಭಾಭವನಕ್ಕೆ 25 ಲಕ್ಷ ರು. ಬಿಡುಗಡೆಗೊಳಿಸುವುದಾಗಿ ಶಾಸಕರು ಭರವಸೆ ನೀಡಿದರು.ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ಜಂಟಿ ನಿರ್ದೇಶಕಿ ಕವಿತಾ ಕೆ.ಆರ್. ಮಾತನಾಡಿ, ಅಂಕಗಳ ಜೊತೆಗೆ ಕೌಶಲ್ಯಗಳು ಕೂಡ ಇರಬೇಕು. ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯವಾದುದು. ಆ ಶಿಸ್ತು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಜಾಸ್ತಿಯೇ ಇದೆ. ಕಾಲೇಜು ಹಂತದಲ್ಲಿ ನಮ್ಮ ಯೋಚನೆಗಳು ಬಲಿಷ್ಠವಾಗುತ್ತದೆ ಎಂದರು.
ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರಕಾಶ್ ರಾವ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ರೈ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಪಾಲನ ಅಧಿಕಾರಿ ಡಾ. ಚಂದ್ರಾವತಿ ಪ್ರತಿಜ್ಞಾವಿಧಿ ಬೋಧಿಸಿದರು.ಐಕ್ಯೂಎಸಿ ಸಂಚಾಲಕ ವಿನಯ್, ದೈಹಿಕ ಶಿಕ್ಷಣ ನಿರ್ದೇಶಕಿ ಜಯಭಾರತಿ, ಸಾಂಸ್ಕೃತಿಕ ಸಂಘದ ಸಂಚಾಲಕಿ ಸೌಮ್ಯ ಎಚ್.ಕೆ., ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಕಾರ್ಯದರ್ಶಿ ವಿಖ್ಯಾತ, ಪ್ರಣೀಶ್, ಧನುಷ್, ಶ್ರೀರಕ್ಷ್, ವಿನಯ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರಣ್ಯ ಹಾಗೂ ಶ್ರುತಿ ನಿರೂಪಿಸಿದರು. ಸೂರಜ್ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))